ಲೈಂಗಿಕ ಕಿರುಕುಳ: ಜಾಗೃತಿ ಅಗತ್ಯ

0
22

ಕಲಬುರಗಿ; ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ವೃತ್ತಿನಿರತ ಮಹಿಳೆಯರಿಗೆ ಬೆದರಿಕೆಯಾಗಿ ಮುಂದುವರಿದಿದೆ, ಮಹಿಳೆಯರ ವಿರುದ್ಧ ನಡೆದ ಅಪರಾಧವನ್ನು ಕಠಿಣ ಶಿಕ್ಷೆಯ ನಿಬಂಧನೆಗಳೊಂದಿಗೆ ಶಿಕ್ಷಿಸಲು ಬಲವಾದ ಕಾಯಿದೆ ಅಸ್ತಿತ್ವದಲ್ಲಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಮತ್ತು ವೃತ್ತಿಯಲ್ಲಿ ವಕೀಲರಾದ ಶ್ರೀಮತಿ ಆರತಿ ತಿವಾರಿ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಬುಧವಾರದಂದು ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನಾಚರಣೆ-2022ರ ಅಂಗವಾಗಿ ಆಂತರಿಕ ದೂರು ಸಮಿತಿ (ಐಸಿಸಿ) ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಲಿಂಗ ಸಂವೇದನೆ ಮತ್ತು ಲೈಂಗಿಕ ಕಿರುಕುಳ ತಡೆ ಕುರಿತು ಮಾತನಾಡಿದರು. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಎರಡು ಬಾರಿ ಕಾಪೆರ್Çರೇಟರ್ ಆಗಿದ್ದ ತಿವಾರಿ ಅವರು ಮಾತುಗಳನ್ನು ಮುಂದುವರೆಸಿ ದೂರು ಸಮಿತಿಗಳು ಮತ್ತು ಸ್ಥಳೀಯ ದೂರು ಸಮಿತಿಗಳು ಇದ್ದಾಗಲೂ ನ್ಯಾಯಾಲಯಗಳು ಮತ್ತು ಆಂತರಿಕ ಕಠಿಣ ಕ್ರಮಗಳು ಮತ್ತು ಕಠಿಣ ಶಿಕ್ಷೆಗಳ ಹೊರತಾಗಿಯೂ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಹಾವಳಿ ಮುಂದುವರೆದಿದೆ ಎಂದು ಹೇಳಿದರು.

Contact Your\'s Advertisement; 9902492681

ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಐಸಿಸಿ ಅಧ್ಯಕ್ಷೆ ಡಾ. ಸುಜಾತಾ ಮಲ್ಲಾಪುರ, ಪೆÇ್ರ. ಜಗದೇವ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಾಯ್ದೆ 2013 ರ ನಿಬಂಧನೆಗಳ ಬಗ್ಗೆ ಮತ್ತು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವಿರುದ್ಧದ ಅಪರಾಧಗಳಿಗೆ ಶಿಕ್ಷೆಯ ಕಟ್ಟುನಿಟ್ಟಾದ ನಿಬಂಧನೆಗಳ ಬಗ್ಗೆ ಪುರುಷರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ಅಗತ್ಯವಿದೆ, ಇದು ಕೆಲಸದ ಸ್ಥಳದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳನ್ನು ಮಾಡುವುದನ್ನು ತಡೆಯುತ್ತದೆ ಎಂದು ತಿವಾರಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here