ಆನೇಕಲ್: ಕನ್ನಡ ಸಾಹಿತ್ಯ ಪರಿಷತ್ತು ಪರಿಷತ್ತು-ಆನೇಕಲ್ ವಿಧಾನಸಭಾ ಕ್ಷೇತ್ರ, ಪ್ರಜಾತಾರೆ ಬಳಗ, ಗಂಧದನಾಡು ಜನಪರ ವೇದಿಕೆ(ಗಜವೇ) ಹಾಗೂ ಕೌದಿ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ ಕಥಾಸ್ಪರ್ಧೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ.
ಬಂದಿದ್ದ 108 ಕಥೆಗಳಲ್ಲಿ ಅಂತಿಮ ಹಂತದ ತೀರ್ಪುಗಾರರಾದ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಕಾಶ್ ಮಂಟೇದ ರವರು ಈ ಕೆಳಕಂಡ ನಾಲ್ಕು ಅತ್ಯುತ್ತಮ ಕಥೆಗಳನ್ನು ಕ್ರಮವಾಗಿ ಬಹುಮಾನಕ್ಕೆ ಆಯ್ಕೆ ಮಾಡಿದ್ದಾರೆ.
- ಖಂಡಾಯದೊಡಯ ಉಘೇ ಉಘೇ – ಪ್ರಕಾಶ್ ಪೊನ್ನಚ್ಚಿ
- ದೇವರಹೊಲ – ಹುಲಿಕುಂಟೆ ಮೂರ್ತಿ
- ಹುಲಿಹೆಜ್ಜೆ – ಜಬೀವುಲ್ಲಾ
- ಕ್ಯಾನ್ಸರ್ – ಅರ್ಪಣ ಎಚ್.ಎಸ್.
ಆಯ್ಕೆಯಾದ ಕಥೆಗಾರರನ್ನು ಜನವರಿ ತಿಂಗಳಲ್ಲಿ ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಹಾಗೂ ಬಹುಮಾನಕ್ಕೆ ಆಯ್ಕೆಗೊಂಡ ನಾಲ್ಕು ಕಥೆಗಳೊಂದಿಗೆ ಮೊದಲ 20 ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.