ಡಿಸೆಂಬರ 24ರಂದು ಕಸಾಪ ತೆಂಗಳಿ ವಲಯ ಘಟಕ ಉದ್ಘಾಟನೆ

0
104

ಕಾಳಗಿ : ಡಿಸೆಂಬರ 24ರಂದು ಬೆಳಿಗ್ಗೆ 11:30ಗಂಟೆಗೆ ಕಾಳಗಿ ತಾಲ್ಲೂಕಿನ ತೆಂಗಳಿ ವಲಯ ಘಟಕ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗು ಉಪನ್ಯಾಸ ಕಾರ್ಯಕ್ರಮ ತೆಂಗಳಿ ಗ್ರಾಮದ ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತೆಂಗಳಿ ವಲಯ ಘಟಕದ ಅಧ್ಯಕ್ಷ ಭೀಮಾಶಂಕರ ಅಂಕಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೆಂಗಳಿ-ಮಂಗಲಗಿ ಶ್ರೀ ಶಾಂತೇಶ್ವರ ಹಿರೇಮಠದ ಡಾ. ಶಾಂತಸೋಮನಾಥ ಶಿವಾಚಾರ್ಯರು, ತೊಟ್ಟನಳ್ಳಿ-ಸಂಗಾವಿ ಮಹಾತೇಶ್ವರ ಹಿರೇಮಠದ ಡಾ. ತ್ರೀಮೂರ್ತಿ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ. ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.  ಸೇಡಂ ಸಂಶೋಧಕ ಸಾಹಿತಿಗಳಾದ ಮುಡಬಿ ಗುಂಡೇರಾವ ಅವರು ನಮ್ಮ ನೆಲವೆ ನಮ್ಮಗೆ ಪ್ರೇರಣೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತ ತಾಲ್ಲೂಕಾ ಅಧ್ಯಕ್ಷ ಸಂತೋಷ ಕುಡಳ್ಳಿ, ತೆಂಗಳಿ ಗ್ರಾಮ ಪಂಚಾಯತ ಅಧ್ಯಕ್ಷ ಮಹಿಬೂಬ ಪಟೇಲ, ಪಿ.ಡಿ.ಓ ಯೋಗೇಶ ಹಿರೇಮಠ ಆಗಮಿಸಲಿದ್ದಾರೆ.

ಅತಿಥಿಗಳಾಗಿ ತೆಂಗಳಿ ಸರಕಾರಿ ಪಿ.ಯು ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ರವಿಕುಮಾರ ದೇಸಾಯಿ, ಸರಕಾರಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಸೇವಂತ ಚವ್ಹಾಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರುಗಳಾದ ಶ್ರೀಮತಿ ಗಂಗಮ್ಮ ನಾಲವಾರ, ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶರಣಬಸಪ್ಪ ಮುನ್ನೊಳ್ಳಿ ಆಗಮಿಸಲಿದ್ದು ಹಾಗು ಕನ್ನಡ ಪರ ಸಂಘಟನೆ ಮುಖ್ಯಸ್ಥರು ವಿಶೇಷ ಅವ್ಹಾನಿತರಾಗಿ ಆಗಮಿಸಲಿದ್ದಾರೆ.

ತೆಂಗಳಿ ವಲಯ ಘಟಕದ ಅಧ್ಯಕ್ಷರಾದ ಭೀಮಾಶಂಕರ ಅಂಕಲಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಎಂದು ವಲಯ ಘಟಕದ ಗೌರವ ಕಾರ್ಯದರ್ಶಿಗಳಾದ ಗುಂಡಪ್ಪ ಪಟ್ಟೇದ ಹಾಗು ಜಗದೀಶ ಕೇಶ್ವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here