ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

0
365

ಕಲಬುರಗಿ; ಶ್ರೀ ಅಂಬಿಗರ ಚೌಡಯ್ಯ ಜಿಲ್ಲಾ ಸರಕಾರಿ, ಅರೆ ಸರಕಾರಿ ನೌಕರರ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 5 ವರ್ಷಗಳ ಅವಧಿಗೆ 14 ಜನ ಸದಸ್ಯರು ಅವಿರೋಧವಾಗಿ ಆಡಳಿತ ಮಂಡಳಿಗೆ ಚುನಾಯಿತರಾಗಿದ್ದು, ಗಂಗಾನಗರದಲ್ಲಿರುವ ಸಂಘದ ಕಛೇರಿಯಲ್ಲಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯು ಚುನಾವಣಾ ಅಧಿಕಾರಿಗಳಾದ ಚಾಂದಭಾಷಾ ಅನ್ಸಾರಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಅಫಜಲಪೂರ ಇವರ ನೇತೃತ್ವದಲ್ಲಿ ನಡೆಯಿತು.

ಅಧ್ಯಕ್ಷರ ಸ್ಥಾನಕ್ಕೆ ಶರಣಮ್ಮಾ ಕಟ್ಟಿಮನಿ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಭೀಮರಾಯ ಶಿವರಾಯ ಹಿಟ್ಟಿನ ರವರು ಎರಡು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

Contact Your\'s Advertisement; 9902492681

ನೂತನ ನಿರ್ದೇಶಕರುಗಳಾದ ಪ್ರಕಾಶ ಎಲ್.ಹೊನ್ನಳ್ಳಿ, ಅವ್ವಣ್ಣ ವಾಯ್.ತಳವಾರ, ರಮೇಶಕುಮಾರ ಹರವಾಳ, ಶಾಂತಪ್ಪಾ ಎನ್.ಜಮಾದಾರ, ರಮೇಶ ಜಿ.ತಲಾರಿ, ಮದನಕುಮಾರ ಎನ್.ಮರಕಲ್, ಜಗದೀಶ ಎ.ಮುಕುರುಂಬಿ, ಮರೆಪ್ಪಾ ಎಸ್.ಆವೇರಿ, ಭೀಮಾಶಂಕರ ಎಮ್.ಜಮಾದಾರ, ವೆಂಕಮ್ಮಾ ಎಮ್.ಆವೇರಿ, ಜಯಶ್ರೀ ಎಸ್.ಜಮಾದಾರ, ಶಶಿಕಲಾ ವಠಾರ, ಹಾಗೂ ಕಾರ್ಯದರ್ಶಿಗಳಾದ ಕುಮಾರದತ್ತ ಡಿ.ಸೋಲಾಪೂರ, ಭೀಮರಾವ.ಬಿ.ಕಟ್ಟಿಮನಿ, ಶರಣಬಸಪ್ಪಾ ಎನ್.ಇಟ್ಟಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here