ಸುರಪುರ:ತಾಲೂಕಿನ ಖಾನಾಪುರ ಎಸ್.ಹೆಚ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಕನ್ನಡ ಸೇನೆ ಕರ್ನಾಟಕ ಸಂಘಟನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಭಾಗನಾಥ ಗುತ್ತೇದಾರ ಆರೋಪಿಸಿದರು.
ನಗರದ ತಾಲೂಕು ಪಂಚಾಯತ್ ಕಚೇರಿ ಮುಂದೆ ಸಂಘಟನೆಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ,ಖಾನಾಪುರ ಎಸ್.ಹೆಚ್ ಗ್ರಾಮದಲ್ಲಿನ ಎಲ್ಲಾ ರಸ್ತೆಗಳು ಕಸದಿಂದ ತುಂಬಿವೆ,ಚರಂಡಿ ಸ್ವಚ್ಛತೆ ಇಲ್ಲದೆ ಊರತುಂಬಾ ದುರ್ವಾಸನೆ ಬೀರುತ್ತಿದೆ.ಜನರು ನಿತ್ಯವು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ.ಇದರ ಕುರಿತು ಗ್ರಾಮ ಪಂಚಾಯತಿ ಪಿಡಿಓ ಅವರಿಗೆ ಹೇಳಿದರೆ ಗಮನಹರಿಸುತ್ತಿಲ್ಲ,ಪಿಡಿಓ ಗ್ರಾಮ ಪಂಚಾಯಿತಿ ಕಚೇರಿಗೆ ಬರುವುದೇ ಯಾವಾಗೋ ಒಮ್ಮೆ ನೆನಪಾದಾಗ ಬರುತ್ತಾರೆ.ಇದರಿಂದ ಗ್ರಾಮದ ಜನರು ನರಕ ಯಾತನೆ ಅನುಭವಿಸುವಂತಾಗಿದೆ.ಇದರಿಂದ ಗ್ರಾಮದ ಜನರು ಬೇಸತ್ತಿದ್ದಾರೆ.ಆದ್ದರಿಂದ ಕರ್ತವ್ಯ ನಿರ್ವಹಿಸದ ಪಿಡಿಓ ಅವರನ್ನು ಅಮಾನತ್ತುಗೊಳಿಸಿ ಗ್ರಾಮದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗೆ ಬರೆದ ಮನವಿಯನ್ನು ತಾಲೂಕು ಪಂಚಾಯತಿ ಇಓ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ರವಿ ಠಾಣಾಗುಂದಿ,ಶಂಕರ್ ನಾಯಕ,ಹನುಮಗೌಡ ಮಾಲಿ ಪಾಟೀಲ್,ಪರಶುರಾಮ್ ಹಡಪದ್,ಬಸ್ಸು ಚಿಲ್ಲಾಳ,ವಿರೇಶ ಶಿರÀಗೋಳ,ಸಂತೋಷ ಮದುಕುಂಟಿ ಸೇರಿದಂತೆ ಅನೇಕರಿದ್ದರು.