ಕಾಳಗಿ: ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ

0
15

ಕಲಬುರಗಿ :ಜಿಲ್ಲೆಯ ಕಾಳಗಿ ಪಟ್ಟಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು. ಕಾಳಗಿ ಪಟ್ಟಣದ ಕೋಲಿ ಸಮಾಜದ ಅಧ್ಯಕ್ಷರಾದ ಜಗನಾಥ್ ಚಂದನಕೆರಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ.

ಅಂಬಿಗರ ಚೌಡಯ್ಯನವರ ವಚನಗಳು ಸಮಾಜದಲ್ಲಿಯ ಮುಢನಂಬಿಕೆ, ಜಾತಿವಾದ, ಮೇಲು ಕೀಳು ಭಾವನೆಗಳನ್ನು ಹೋಗಲಾಡಿಸಲು ಪೂರಕವಾಗಿದ್ದು. ಜನ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

Contact Your\'s Advertisement; 9902492681

ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರರಾದ ನಾಗನಾಥ್ ತರಗೆ, ಪಟ್ಟಣ ಪಂಚಾಯತನಲ್ಲಿ ಮುಖ್ಯಧಿಕಾರಿಗಳಾದ ವೆಂಕಟೇಶ್ ತೆಲಂಗ, ಕಾಂಗ್ರೆಸ್ ಕಚೇರಿಯಲ್ಲಿ ವೇಪ್ರಕಾಶ್ ಮೋಟಗಿ, ಬಿಜೆಪಿ ಕಚೇರಿಯಲ್ಲಿ ಪ್ರಶಾಂತ್ ಕದಂ ಚೌಡಯ್ಯನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಸಮಾಜದ ಮುಖಂಡರಾದ ಶಿವಶರಪ್ಪ ಗುತ್ತೇದಾರ, ಶಿವರಾಯ ಕೊಯಿ, ಬಾಬು ನಾಟಿಕಾರ್, ಸಂಗಮೇಶ ಬಡಿಗೇರ್
ಸಂತೋಷ ಕಡಬುರ್, ಕಾಳಪ್ಪ ತಳವಾರ, ಬಸವರಾಜ್ ಗುಂಡಾನೋರ್, ಕಾಳಪ್ಪ ಚಿಮ್ಮಚೋಡ, ಕಾಳಪ್ಪ ಕರೆಮಾನೋರ್
ಸೇರಿದಂತೆ ಅಪಾರ ಕುಲಭಾಂದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here