ಕಲಬುರಗಿ: ಯುವ ಜಾಗೃತಿ ವೇದಿಕೆ ಮತ್ತು ಫಿರದೋಸ್ ಕಾಲೋನಿಯಲ್ಲಿ ವೇಲ್ಫರ್ ಸೂಸೈಟಿ ಸಹೋಗಹದಲ್ಲಿ ಗುರುವಾರ ನಗರ ಫಿರದೋಸ್ ನಗರ ಬಡಾವಣೆಯಲ್ಲಿ 74ನೇ ಗಣರಾಜೋತ್ಸವದ ಆಚರಣೆ ಮಾಡಲಾಯಿತು.
ಫಿರದೋಸ್ ನಗರ ವೇಲ್ಫರ್ ಸೂಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್ ಧ್ವಜಾರೋಹಣ ನೆರವೆರಿಸಿದರು. ಈ ವೇಳೆಯಲ್ಲಿ ಯುವ ಜಾಗೃತಿ ವೇದಿಕೆ ಕಾರ್ಯಾದರ್ಶಿ ಸಾಜಿದ್ ಅಲಿ ಅವರ ನೇತೃತ್ವದಲ್ಲಿ ಬಡಾವಣೆಯ ಕಲಿಕಾ ಕೇಂದ್ರದ ಮಕ್ಕಳಿಗೆ ಬೆಳಗ್ಗಿನ ಉಪಹಾರ ಮತ್ತು ಸಿಹಿ ಹಂಚಿ ಸಂಭ್ರಮಿಸಲಾಯಿತು.
ಫಿರದೋಸ್ ಕಾಲೋನಿ ವೇಲ್ಪರ್ ಸೂಸೈಟಿಯ ಉಪಾಧ್ಯಕ್ಷರಾದ ಶೇಖ್ ಹಾಜಿ ಚಾಂದ್ ಸಾಬ್, ಕಲಿಕಾ ಕೇಂದ್ರದ ಉಸ್ತುವಾರಿ ಹಸನ್ ಅಲಿ ಸುಲ್ತಾನಪುರಿ, ಬಾಬಾ ಬೈ ಪೆಂಟರ್, ಅಕ್ರಮ್, ಮೊಹ್ಮದ್ ಫೇರೊಜ್, ಹೈದರ್ ಅಲಿ ಬಂದಾ ನವಾಜಿ, ವಾಜಿದ್ ಉರ್ ರಹೇಮಾನ್ ಖಾಜಿ, ನಿಜಾಮೊದ್ದೀನ್ ಸಿದ್ದಿಖಿ, ಮೊಹಮ್ಮದ್ ಜಹೀರ್, ಶೇಖ್ ನವಾಬ್ ಸಾಬ್, ಮೊಹಮ್ಮದ್ ಗೌಸ್, ಅಬ್ದುಲ್ ಮಜೀದ, ಶೌಕತ್ ಅಲಿ ಖಾನ್, ಮಹೇತಾಬ್ ಖಾನ್, ಮೌಲಾನಾ ಅರ್ಮಾನ್ ಸೇರಿದಂತೆ ಹಲವರು ಇದ್ದರು.