ಕಲಬುರಗಿ: ನಗರದ ಶಹಾಬಜಾರ ಬಡಾವಣೆಯಲ್ಲಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಶ ಚವ್ಹಾಣ ಜನ್ಮದಿನದ ನಿಮಿತ್ತ ಅವರ ಗೆಳೆಯರ ಬಳಗದ ವತಿಯಿಂದ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ನಾಗರಿಕರಿಗೆ ಉಚಿತವಾಗಿ ಸರ್ಕಾರಿ ಸೌಲಭ್ಯಗಳಾದ ಆಯುಷಮಾನ ಭಾರತ ಆರೋಗ್ಯ ಕಾರ್ಡ್ – ಇ-ಶ್ರಮ ಕಾರ್ಡ್, ಓಟರ್ ಐಡಿ, ಪಿ.ಎಮ್.ಜಿ – ದಿಶಾ ಉಚಿತ ಕಂಪ್ಯೂಟರ್ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸಿದ್ದಾಜಿ ಪಾಟೀಲ್, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಶ ಚವ್ಹಾಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಮಾಜಿ ಮಹಾನಗರ್ ಪಾಲಿಕೆ ಸದ್ಯಸರಾದ ಶಿವಾನಂದ ಬಂಡಕ್, ಸಾಹೇಬ್ ಗೌಡ, ಬಿಜೆಪಿ ಮುಖಂಡರಾದ ಶಾಂತು ಖೇಮಜಿ, ಸಿದ್ದರಾಮಯ್ಯ ಮಠಪತಿ, ಗಂಗಾಧರ್, ಕಿರಣ, ಶಾಂತವೀರ್, ಮಲ್ಲಿಕಾರ್ಜುನ ಕಲಶೆಟ್ಟಿ, ಸಂಜು, ಶುಭಂ, ಗಜಾನನ ದೇಶಪಾಂಡೆ, ಶರಣಗೌಡ ಅರಕೆರಿ, ಶರಣು ಹೊಸಮಠ, ಸಿದ್ದು ಶೆಟ್ಟಿ, ರಾಜು ಚೌವ್ಹಾಣ ಸೇರಿದಂತೆ ಗೆಳೆಯರ ಬಳಗ ಹಾಗೂ ಬಡಾವಣೆ ಹಿರಿಯರು, ಮಹಿಳಾ ಸಂಘದವರು ಉಪಸ್ಥಿತರಿದ್ದರು.