ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷರಾದ ಶರಣು ಬಿ ಗದ್ದುಗೆ ಅವರು ಇದೇ 24 ರಿಂದ 3 ದಿನಗಳ ಕಾಲ ನಡೆಯುವ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭದ ಕೆ ಕೆ ಆರ್ ಡಿ ಬಿ ನಿರ್ಣಯಕ್ಕೆ ಸ್ವಾಗತಿಸಿದ್ದಾರೆ. ಬಹಳ ಖುಷಿಯ ವಿಷಯ ಕರವೇ ವತಿಯಿಂದ 10 ವರ್ಷಗಳಿಂದ ಕಲ್ಯಾಣ ಕರ್ನಾಟಕ ಉತ್ಸವ ಪ್ರತಿ ವರ್ಷ ಜಿಲ್ಲೆ ತಾಲೂಕುಗಳಲ್ಲಿ ಆಯೋಜಿಸುತ್ತಾ ಬಂದಿದ್ದೆವು. ಆದರೆ ಈಗ ಸರಕಾರ ಅಭಿವೃದ್ದಿ ಮಂಡಳಿ ಮೂರು ದಿನಗಳ ಕಾಲ ವಿಶೇಷವಾಗಿ ಉತ್ಸವ ಆಚರಿಸುವ ನಿರ್ಣಯ ಕೈಗೊಂಡಿದ್ದು ಬಹಳ ಖುಷಿ ಕೊಟ್ಟಿದೆ ಎಂದು ತಿಳಿಸಿದ್ದಾರೆ.
ಇದೇ ಉತ್ಸವ ಕೆಲ ವರ್ಷಗಳ ಹಿಂದೆ ಆಚರಿಸಿದ್ದರೆ ಇನ್ನೂ ಅದಕ್ಕೆ ಅರ್ಥ ಚೆನ್ನಾಗಿ ಬರುತ್ತಿತ್ತು, ಚುನಾವಣೆಗಳು ಸಮೀಪಿಸಿದಾಗ ಈ ಉತ್ಸವ ಆಯೋಜಿಸಿದ್ದು ಕೆಲವರಿಗೆ ಗೊಂದಲ ಹಾಗೂ ಪ್ರತಿಪಕ್ಷಗಳಿಗೆ ಸಲ್ಪ ಅಸಮಾಧಾನ ತರುವ ಸಂಗತಿ ಎಂದು ತಿಳಿಸಿದ್ದಾರೆ.
ಪರವಾಗಿಲ್ಲ ಈ ಭಾಗದಲ್ಲಿ ನಡೆಯುವ ಉತ್ಸವ ಎಲ್ಲಾ ಸಾಹಿತಿಗಳ ಕಲಾವಿದರ ಲೇಖಕರ ಕನ್ನಡ ಪರ ಸಂಘಟನೆಗಳ ಗಣನೆಗೆ ತೆಗೆದುಕೊಂಡು ಜನಸಾಮಾನ್ಯರಿಗೆ ಖುಷಿ ಕೊಡುವ ಉತ್ಸವ ಆಗಬೇಕೆಂದು ಗದ್ದುಗೆ ಕೆ ಕೆ ಆರ್ವಡಿ ಬಿ ಅಧ್ಯಕ್ಷರಿಗೆ ಶಾಸಕರಿಗೆ ಸಚಿವರಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.