ಎಸ್.ಸಿ.-ಎಸ್.ಟಿ. ನೌಕರರ‌ ಸಂಘದ ನೂತನ ಪದಾಧಿಕಾರಿಗಳ‌ ಪದಗ್ರಹಣ

0
28
  • ಮೀಸಲಾತಿ ಸಂರಕ್ಷಣೆಗೆ‌ ಸಂಘಟನೆ ‌ಅವಶ್ಯಕ: ಡಾ.ವಿಜಯಕುಮಾರ ಸಾಲಿಮನಿ

ಕಲಬುರಗಿ,ಫೆ.12: ಸಂವಿಧಾನಬದ್ಧವಾಗಿ ನೀಡಲಾಗಿರುವ ಮೀಸಲಾತಿ ಸಂರಕ್ಷಣೆಗೆ ನೌಕರರಲ್ಲಿ‌ ಸಂಘಟನೆ ಅವಶ್ಯಕ ಎಂದು ಸರ್ಕಾರಿ ‌ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ವಿಜಯಕುಮಾರ್ ‌ಸಾಲಿಮನಿ ಅಭಿಪ್ರಾಯಪಟ್ಟರು.

ರವಿವಾರ ಕಲಬುರಗಿ ನಗರದ ಜೆಸ್ಕಾಂ ನಿಗಮದ ಕಚೇರಿ ಆವರಣದಲ್ಲಿರುವ ಇಂಜಿನೀಯರ್ಸ್ ಅಸೋಸಿಯೇಷನ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ, ಅರೇ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದಿಂದ ಆಯೋಜಿಸಿದ ಕಲಬುರಗಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಶ್ರಮದಿಂದ ಕಟ್ಟಿದ ಸಂಘವನ್ನು ಕೆಲವರು ಒಡೆಯಲು ಪ್ರಯತ್ನಿಸುತ್ತಾರೆ. ಹೀಗಾಗಿ ಸಂಘದ ನೇತೃತ್ವ ವಹಿದವರು ಯಾವುದೇ‌ ಆಸೆ, ಆಮೀಷಕ್ಕೆ‌ ಒಳಗಾಗದೆ ಸಂಘ ಮತ್ತು ನೌಕರರ ಉನ್ನತ್ತಿಗೆ ಶ್ರಮಿಸಬೇಕು ಎಂದು‌ ಕರೆ‌ ನೀಡಿದ ಅವರು, ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.

ಕಾರ್ಯಕ್ರಮದ‌ದಿವ್ಯ ಸಾನಿಧ್ಯ ವಹಿಸಿದ್ದ ಕಲಬುರಗಿ ಬುದ್ಧ ವಿಹಾರದ ಪೂಜ್ಯ ಸಂಘಾನಂದ‌ ಭಂತೆಜಿ ಅವರು ಧಮ್ಮ‌ವಂದನೆಯೊಂದಿಗೆ ಮಾತು ಆರಂಭಿಸಿ, ನೂತನ ಚುನಾಯಿತ ಪದಾಧಿಕಾರಿಗಳು ಹೊಸ ಚೈತನ್ಯದಿಂದ‌ ಜಿಲ್ಲೆಯ ನೌಕರರ ಮತ್ತು ಸಮುದಾಯದ‌ ಉನ್ನತ್ತಿಗೆ ಶ್ರಮಿಸಬೇಕು ಎಂದು ಆಶೀರ್ವಚನ‌ ನೀಡಿದರು. ಕೆ.ಕೆ.ಆರ್.ಡಿ.ಬಿ. ಅಧೀನ ಕಾರ್ಯದರ್ಶಿ ಮಲ್ಲೇಶ್ ತಂಗಾ ಅವರು‌ ಕಾರ್ಯಕ್ರಮ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ 2023ನೇ‌ ದಿನದರ್ಶಿ ಕ್ಯಾಲೆಂಡರ್ ಪೂಜ್ಯ ಸಂಗಾನಂದ‌ ಭಂತೇಜಿ ಸೇರಿದಂತೆ ಗಣ್ಯರು ಬಿಡುಗಡೆಗೊಳಿಸಿದರು.

ಜಿಲ್ಲಾಧ್ಯಕ್ಷ‌ ಮಹೇಶ ಸಿ. ಹುಬಳ್ಳಿ ಅಧ್ಯಕ್ಷತೆಯಲ್ಲಿ‌ ನಡೆದ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತ ಸುರೇಶ ಶರ್ಮಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ‌ ಸುನೀಲ ಚವ್ಹಾಣ, ಎಸ್.ಸಿ.-ಎಸ್.ಟಿ. ನೌಕರರ ಸಂಘದ ಜಿಲ್ಲಾ ಘಟಕದ‌ ಗೌರವಾಧ್ಯಕ್ಷ ಸೋಮಶೇಖರ‌ ಮದನಕರ್, ಗ್ರೇಡ್ 2 ತಹಶೀಲ್ದಾರ ರಮೇಶ ಆಲೂರ, ಉಪ ತಹಶೀಲ್ದಾರರಾದ ದೇವಮ್ಮ , ಶಿವಕಾಂತಮ್ಮ‌ ಸೇರಿದಂತೆ ಸಂಘದ ಪದಾಧಿಕಾರಿಗಳಾದ ಗಣಪತಿ ಬಬಲಾದ, ಶಿವಾನಂದ ಟೋಳೆ, ಸದಾಶಿವ ಹಾಗರಗಿ, ಸದಾಶಿವ ರಾತ್ರಿಕರ್ ಹಾಗೂ ನೂರಾರು ಸಂಖ್ಯೆಯಲ್ಲಿ‌ ನೌಕರರು ಭಾಗವಹಿಸಿದ್ದರು.

ಹಿರಿಯ ಉಪಾಧ್ಯಕ್ಷ ವಿಠ್ಠಲ ಗೋಳಾ ಪ್ರಾಸ್ತಾವಿಕವಾಗಿ‌ ಮಾತನಾಡಿ, ಸಂಘ ಇದೂವರೆಗೆ‌ ಸಾಗಿ ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಜಿಲ್ಲಾ ಕಾರ್ಯದರ್ಶಿ ಡಾ.ಪಂಡಿತ್ ಬಿ.ಕೆ. ಸ್ವಾಗತಿಸಿದರು. ಜಿಲ್ಲಾ ಸಂಘಟನಾ‌ ಕಾರ್ಯದರ್ಶಿ ವಿದ್ಯಾಧರ ಕಾಂಬಳೆ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸಂತೋಷಕುಮಾರ ಆರ್.ಕೆ. ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here