ಕಲಬುರಗಿ; ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ( ಬಿಳವಾರ ) ನಗರದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಸಮಾಜ ವಿಜ್ಞಾನ ವಿಷಯದ ಸಹ ಶಿಕ್ಷಕರಾದ ಶ್ರೀ ರವೀಂದ್ರ ಮದ್ದರಕಿಗೆ ಶೈಕ್ಷಣಿಕ ಸೇವೆ ಗುರುತಿಸಿ ವೀರಕೇಸರಿ ಕಲಾ,ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಶಖಾಪುರ ೨೦೨೩ ನೇ ಸಾಲಿನ ಕೊಡಮಾಡುವ ೧೨ ನೇ ವರ್ಷದ ಜಾನಪದ ಜಾಗರಣೆ ಕಾರ್ಯಕ್ರಮದಲ್ಲಿ ಇವರಿಗೆ ವೀರ ಕೇಸರಿ ಸೇವಾ ಸಿರಿ ಪ್ರಶಸ್ತಿ ನೀಡಿ ಗೌರವಿಸದರು.
ಶ್ರೀಯುತರು ಪ್ರಶಸ್ತಿ ಪುರಸ್ಕೃತರಾದ ಪ್ರಯುಕ್ತ ಶಹಾಪುರ ನಗರದ ಗೋಕುಲ ಪದವಿ ಮಹಾವಿದ್ಯಾಲಯದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೇತಕಿ ಸಂಗಮೇಶ್ವರ ಶಿಕ್ಷಣ ಟ್ರಸ್ಟ್ ಅಧ್ಯಕ್ಷರು ಮತ್ತು ಉಪನ್ಯಾಸಕರಾದ ಡಿ.ಪಿ.ಸಜ್ಜನ,ಉಪನ್ಯಾಸಕರಾದ ದೇವು ನಾಯಕ ಮೂಡಬೂಳ,ಧನರಾಜ ದೊಡ್ಮನಿ,ಸಿದ್ದಲಿಂಗ ಮಾನೇಗಾರ,ಕಾಲೇಜಿನ ಪ್ರಾಂಶುಪಾಲರಾದ ಮಹೇಶ ಶೇರಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.