ಕಲಬುರಗಿ: ರಾಜ್ಯಾದ್ಯಂತ ನಡೆದ ನ್ಯಾಯವಾದಿಗಳ ಹೋರಾಟಕ್ಕೆ ಮಣಿದು ರಾಜ್ಯ ಸರಕಾರ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತಂದಿದಕ್ಕೆ ನಗರದ ನ್ಯಾಯಲಯದ ವೃತ್ತದಲ್ಲಿ ನ್ಯಾಯವಾದಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ, ಕರ್ನಾಟಕ ರಾಜ್ಯ ಎಸ್.ಸಿ.ಎಸ್.ಟಿ.ನ್ಯಾಯವಾದಿಗಳ ಕಾನುನು ಜಾಗೃತ ಸಂಘದ ಅಧ್ಯಕ್ಷ ಮಸ್ತಾನ ದಂಡೆ, ಹಿರಿಯ ನ್ಯಾಯವಾದಿಗಳಾದ ಹಣಮಂತ ಯಸಂಗಿ, ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಜಯಾನಂದಯ್ಯಾ ಸ್ವಾಮಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ಫತ್ರುಬಿಶಾಹ, ಕಾರ್ಯದರ್ಶಿಗಳಾದ ಪಿ.ಎಸ್.ಕಪನೂರ, ಜಂಟಿ ಕಾರ್ಯದರ್ಶಿ ದೇವಿನಾಥ ಎಸ್ ಮಾಳಗಿ, ಖಜಾಂಚಿ ವಿಶ್ವನಾಥ ಇಜೇರಿ, ರಮೇಶ ರಾಗಿ, ಸಂಗೀತಾ ಜೆ.ಸ್ವಾಮಿ, ಶ್ರೀದೇವಿ ನರೋಣಿ, ಸುರೇಕಾ ಪಾಟೀಲ, ವಿನೋದಕುಮಾರ ಜನೆವರಿ ಸೇರಿದಂತೆ ನ್ಯಾಯವಾದಿಗಳು ಇದ್ದರು.