ಕಲಬುರಗಿ: ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾ ಸಮಿತಿಯ ವತಿಯಿಂದ ಮಾಜಿ ಮುಖ್ಯಮಂತ್ರಿಗಳು, ರೈತ ನಾಯಕರು, ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ನಿಮಿತ್ತ ನಗರದ ಕೋರಂಟಿ ಹನುಮಾನ್ ಮಂದಿರದಲ್ಲಿ ಪೂಜೆ ಸಲ್ಲಿಸಿ 80 ಟೆಂಗುಗಳನ್ನು ಸಿಡಿಗಾಯಿ ಒಡೆಯುವ ಮೂಲಕ ಯಡಿಯೂರಪ್ಪ ಅವರ ಸುದೀರ್ಘ ಆಯಸ್ಸು, ಆರೋಗ್ಯ, ನೆಮ್ಮದಿ ಹಾಗೂ ಯಶಸ್ಸನ್ನು ಕೋರಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಅಪ್ಪಟ ಅಭಿಮಾನಿ ಆನಂದ್ ಕಣಸೂರ, ಮತ್ತು ಮಲ್ಲಿಕಾರ್ಜುನ ಸಿದ್ದರಾಮಗೋಳ, ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾ ಅಧ್ಯಕ್ಷರಾದ ದಯಾನಂದ ಪಾಟೀಲ್, ಪ್ರಮುಖರಾದ ಶ್ರೀಧರ ನಾಗನಹಳ್ಳಿ, ಗೌರಿ ಚಿಚಕೂಟೆ, ಭಾಗೀರಥಿ ಗುನ್ನಾಪುರ, ಸತೀಶ ಮಾಹುರ, ಗುರುರಾಜ ಅಂಬಾಡಿ, ವಿಜಯಕುಮಾರ ಪಾಟೀಲ್, ಬಸ್ಸು ದೇವಣಿ, ರಮೇಶ ಕುಸನೂರ, ಅಶೋಕ ಪೆÇದ್ದಾರ, ಅಣ್ಣಾರಾವ ದುರ್ಗದ ಸೇರಿದಂತೆ ಯಡಿಯೂರಪ್ಪ ಅಭಿಮಾನಿಗಳು ಉಪಸ್ಥಿತರಿದ್ದರು.