ಆಳಂದ: ಪಟ್ಟಣದ ಉಮರ್ಗಾ ರಸ್ತೆಯಲ್ಲಿ ಸೋಮವಾರ ವಾರ್ಡ ಸಂಖ್ಯೆ 26 ರ ಪುರಸಭೆ ಸದಸ್ಯ ಶೀವಪುತ್ರ ನಡಗೇರಿ ಅವರು ತರೆದ ” ಜನ ಸಂಪರ್ಕ ಕಚೇರಿ ” ಯನ್ನು ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು,ಪಕ್ಷದ ಕುರಿತು ನಿರಂತರವಾಗಿ ಸರ್ಕಾರದ ಯೋಜನೆಯ ಕುರಿತು ಮತದಾರರಿಗೆ ಜಾಗೃತಿ ಮೂಡಿಸಿ,ವಾರ್ಡಿನ ಸಮಸ್ಯೆಗಳು ಬಗೆಹೆರಿಸಿ ಎಂದು ಸೂಚಿಸಿದರು.
ಜನಪ್ರಿಯ ಪುರಸಭೆ ಸದಸ್ಯ ಶೀವಪುತ್ರ ನಡಗೇರಿ ಮಾತನಾಡಿ,ವಾರ್ಡಿನ ಸಮಸ್ಯೆಗಳ ಕುರಿತು ನಿರಂತರವಾಗಿ ಕಾರ್ಯ ಮಾಡುತ್ತಿದ್ದು,ಸರ್ಕಾರದ ಯೋಜನೆ ಮಾಹಿತಿ ಜನರಿಗೆ ಹೇಳಲಾಗುತ್ತಿದೆ ಎಂದು ಶಾಸಕರ ಗಮನಕ್ಕೆ ತಂದರು.
ತಡಕಲ್ ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ ಗುತ್ತೇದಾರ ಸೇರಿದಂತೆ ಕೇಲ ಆಳಂದ ಪುರಸಭೆ ಸದಸ್ಯರು,ಮುಖಂಡರಾದ ವಿಠ್ಠಲರಾವ ಪಾಟೀಲ, ಸಂತೋಷ ಹಾದಿಮಣಿ,ಶ್ರೀ ಶೈಲ್ ಖಜೂರಿ,ಶರಣಗೌಡ ಪಾಟೀಲ ,ಶಿವೂ ಹೀರಾ ಸಿದ್ಪು ಪೂಜಾರಿ,ಸಿದ್ದು ಹಿರೋಳಿ ,ಪ್ರಕಾಶ ತೋಳೆ, ಪಪ್ಪು ತೊಳೆ ಸೇರಿ,ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಪಾಲ್ಗೊಂಡಿದ್ದರು.ಸುನೀಲ್ ಹಿರೋಳಿಕರ ನಿರೂಪಣೆ ಮಾಡಿದರು.