ಕಲಬುರಗಿ : ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ವಲಯದ ಕೊಗುನೂರು ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಗ್ರಾಮ ಪಂಚಾಯತ್ ಕೊಗನೂರು ಸಹಯೋಗದಲ್ಲಿ ಶುದ್ಧ ಗಂಗಾ ಕುಡಿಯುವ ನೀರಿನ ಘಟಕದಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ನಿತಿನ್ ವಿ ಗುತ್ತೇದಾರ್ ಉದ್ಘಾಟಿಸಿದರು.
ಕೊಗನೂರು ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಂದ್ರಪ್ಪ ಪೆÇಲೀಸ್ ಪಾಟೀಲ್, ನಿರ್ದೇಶಕ ಸತೀಶ್ ಸುವರ್ಣ, ಪಿಡಿಓ ಲಕ್ಷ್ಮಿ, ಯೋಜನಾಧಿಕಾರಿ ಶಿವರಾಜ್ ಆಚಾರ್ಯ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷೆ ಕಲ್ಲಮ್ಮ ಶಾಂತಪ್ಪ ಮಾತೊಳಿ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಮುಖಂಡರು, ಯೋಜನೆಯ ಕಾರ್ಯಕರ್ತರು ಸೇವಾಪ್ರತಿನಿದಿಗಳು, ಗ್ರಾಮದ ಹಿರಿಯರು, ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.