ಕಾಳಗಿ; ಕೋಡ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ

0
20

ಕಾಳಗಿ; ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಕಾಳಗಿ – ಕೋಡ್ಲಿ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಪಟ್ಟಣದ ಶ್ರೀ ನೀಲಕಂಠ ಕಾಳೆಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ್ ಗುತ್ತೇದಾರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಸುಭಾಸ್ ರಾಠೋಡ್ ಕರ್ನಾಟಕದಲ್ಲಿ ಈಗಾಗಲೇ ಇದು ಚುನಾವಣೆ ಯುದ್ಧ ಅಲ್ಲ ಧರ್ಮ ಯುದ್ಧವಾಗಿದೆ.
4 ವರ್ಷದಲ್ಲಿ ಬಿಜೆಪಿ ಅತ್ಯಂತ ಕೆಟ್ಟ ರೀತಿಯ ಸರಕಾರ, ಭ್ರಷ್ಟ ಸರಕಾರ, ಜಾತೀಯತೆ, ಧರ್ಮದ ಆಧಾರದ ಮೇಲೆ ಶೋಷಣೆ ಮಾಡಿ ಜಗಳ ಹಚ್ಚಿದಂತ ಸರಕಾರವಾಗಿದೆ. ಬಡವರಿಗೆ ಅತ್ಯಂತ ಕೆಟ್ಟ ಕಾಲ ತಂದ ಸರಕಾರವನ್ನು ಅಧಿಕಾರದಿಂದ ತೆಗೆಯುವುದೇ ನಮ್ಮ ಪಕ್ಷದ ನಿಲುವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ನಂತರ ಮಾತನಾಡಿದ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ್ ಗುತ್ತೇದಾರ್. ಎಲ್ಲಾ ಪದಾಧಿಕಾರಿಗಳು ತಳಹಂತದಿಂದ ಪಕ್ಷ ಬಲಪಡಿಸಲು ಜವಾಬ್ದಾರಿ ನೀಡಿದ್ದು 40% ಕಮಿಷನ್ ಸರಕಾರವನ್ನು ಸೋಲಿಸಿ ಬರುವ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರುವುದಾಗಿ ತಿಳಿಸಿದರು.ಈ ಸಂಧರ್ಭದಲ್ಲಿ ಭೀಮರಾವ್ ಟಿ, ಟಿ. ದೇವಿಂದ್ರಪ್ಪ ಹೆಬ್ಬಾಳ್, ಮಹೇಬುಬ್ ಪಟೇಲ್, ವಿಶ್ವನಾಥ್ ವನಮಾಲಿ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here