ಕಲಬುರಗಿ: ನಗರದ ಸ್ಟೇಷನ್ ಏರಿಯಾದಲ್ಲಿರುವ ಖಾಸಗಿ ಸಭಾಂಗಣದಲ್ಲಿ ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕೆ.ಪಿ.ಎಂ.ಇ ಕಾಯ್ದೆ ಅಧಿನಿಯಮ ಮತ್ತು ನಿಯಮಗಳ ಕುರಿತು ಕಾರ್ಯಗಾರವನ್ನು ಆ.ಕು.ಕ ವಿಭಾಗೀಯ ಸಹ ನಿರ್ದೇಶಕ ಡಾ.ಶಂಕ್ರೆಪ್ಪ ಮೈಲಾರೆ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರಾಜಶೇಖರ ಮಾಲಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಅತಥಿಯಾಗಿ ಕೆಪಿಎಂಇ ವೈದ್ಯಕೀಯ 2 ಬೆಂಗಳೂರು ಉಪ ನಿರ್ದೇಶಕ ಡಾ.ವಿವೇಕ ದೋರೈ, ಆ.ಕು.ಕ ವಿಭಾಗೀಯ ಉಪ ಸಹ ನಿರ್ದೇಶಕ ಡಾ.ಶರಣಬಸಪ್ಪ ಗಣಜಲಖೇಡ, ಜಿಲ್ಲಾ ಶಸ್ತ್ರಜ್ಞರು ಮತ್ತು ಜಿಲ್ಲಾ ಆಸ್ಪತ್ರೆ ಅಧಿಕ್ಷಕ ಡಾ.ಅಂಬಾರಾಯ ರುದ್ರವಾಡಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಶರಣಪ್ಪ ಎಂ.ಡಿ. ಸೇರಿದಂತೆ 7 ಜಿಲ್ಲೆಯ ಜಿಲ್ಲಾ ಆಕುಕ ಅಧಿಕಾರಿಗಳು, ಜಿಲ್ಲಾ ಕುಕ ಅಧಿಕಾರಿಗಳು, ತಾಲೂಕಾ ಆರೋಗ್ಯ ಅಧಿಕಾರಿಗಳು ಇದ್ದರು.
ನಂತರ ಡಾ.ವಿವೇಕ ದೋರೈ, ಮಾತನಾಡಿ ಕೆ.ಪಿ.ಎಂ.ಇ ಕಾಯ್ದೆ ಅನುಷ್ಠಾನಗೊಳಿಸಲು ವಿವರವಾದ ಮಾಹಿತಿ ನೀಡಿದರು.