ಕಲಬುರಗಿ: ಸಿ ಎಂ ಸಿದ್ದರಾಮಯ್ಯನವರು ರಾಷ್ಟ್ರಪತಿಯವರ ಬಗ್ಗೆ ಅಸಂಸದೀಯ ಪದ ಬಳಸಿರುವುದು ಮನಸ್ಸಿಗೆ ನೋವುಂಟಾಗಿದೆ ಎಂದು ಬಿಜೆಪಿ ರಾಜ್ಯ ಮಾಧ್ಯಮ ಪ್ಯಾನೆಲಿಸ್ಟ್ ಹಾಗೂ ಬಿಜೆಪಿ ರಾಜ್ಯ ವೈದ್ಯರ ಸೆಲ್ ಸದಸ್ಯರಾದ ಡಾ: ಸುಧಾ ಆರ್ ಹಾಲಕಾಯಿ ಖಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು. ಪ್ರಜಾತಂತ್ರದಲ್ಲಿ ಪರಸ್ಪರ ಗೌರವ ಕೊಡುವುದೇ ಸಂವಿಧಾನದ ಮೂಲ ಆಶಯವಾಗಿದೆ. ದಲಿತ ಹೆಣ್ಮಗಳು ರಾಷ್ಟ್ರಪತಿ ಎಂಬ ಬಹುದೊಡ್ಡ ಹುದ್ದೆಗೆ ಆಯ್ಕೆಯಾದ ನಂತರ ಈ ರೀತಿ ಅವರ ಬಗ್ಗೆ ಅಸಂಸದೀಯ ಪದ ಮಾತನಾಡುವುದು, ಏಕವಚನದಲ್ಲಿ ಮಾತನಾಡಿರುವುದು ಕನ್ನಡದ ಸಂಸ್ಕøತಿಗೆ ಶೋಭೆ ತರತಕ್ಕಂಥದ್ದಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿಗಳು ಸೇರಿ ಸಾಂವಿಧಾನಿಕ ಹುದ್ದೆಗಳಿಗೆ ಕೊಡಬೇಕಾದ ಯಾವುದೇ ಗೌರವವನ್ನು ನೀಡದೆ ತಮ್ಮ ವ್ಯಕ್ತಿತ್ವ ನಗಣ್ಯ ಎಂಬುದನ್ನು ತಾವೇ ನಿರೂಪಿಸಿದ್ದಾರೆ. ವ್ಯಕ್ತಿತ್ವಹೀನ ವ್ಯಕ್ತಿಯ ಕೈಯಲ್ಲಿ ಕರ್ನಾಟಕದ ಅಧಿಕಾರ ಇರುವುದು ನಿಜಕ್ಕೂ ಕಳವಳಕಾರಿ. ಪರಿಶಿಷ್ಟ ವರ್ಗದ ಒಬ್ಬರು ಮಹಿಳೆಯ ಬಗ್ಗೆ ಈ ರೀತಿ ನಡೆದುಕೊಂಡಿರುವುದು ಖಂಡನೀಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.