ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿ ವಿರುದ್ಧ ಪದ ಬಳಕ್ಕೆಗೆ ಡಾ: ಸುಧಾ ಆರ್ ಹಾಲಕಾಯಿ ಖಂಡನೆ

0
15

ಕಲಬುರಗಿ: ಸಿ ಎಂ ಸಿದ್ದರಾಮಯ್ಯನವರು ರಾಷ್ಟ್ರಪತಿಯವರ ಬಗ್ಗೆ ಅಸಂಸದೀಯ ಪದ ಬಳಸಿರುವುದು ಮನಸ್ಸಿಗೆ ನೋವುಂಟಾಗಿದೆ ಎಂದು ಬಿಜೆಪಿ ರಾಜ್ಯ ಮಾಧ್ಯಮ ಪ್ಯಾನೆಲಿಸ್ಟ್ ಹಾಗೂ ಬಿಜೆಪಿ ರಾಜ್ಯ ವೈದ್ಯರ ಸೆಲ್ ಸದಸ್ಯರಾದ ಡಾ: ಸುಧಾ ಆರ್ ಹಾಲಕಾಯಿ ಖಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು. ಪ್ರಜಾತಂತ್ರದಲ್ಲಿ ಪರಸ್ಪರ ಗೌರವ ಕೊಡುವುದೇ ಸಂವಿಧಾನದ ಮೂಲ ಆಶಯವಾಗಿದೆ. ದಲಿತ ಹೆಣ್ಮಗಳು ರಾಷ್ಟ್ರಪತಿ ಎಂಬ ಬಹುದೊಡ್ಡ ಹುದ್ದೆಗೆ ಆಯ್ಕೆಯಾದ ನಂತರ ಈ ರೀತಿ ಅವರ ಬಗ್ಗೆ ಅಸಂಸದೀಯ ಪದ ಮಾತನಾಡುವುದು, ಏಕವಚನದಲ್ಲಿ ಮಾತನಾಡಿರುವುದು ಕನ್ನಡದ ಸಂಸ್ಕøತಿಗೆ ಶೋಭೆ ತರತಕ್ಕಂಥದ್ದಲ್ಲ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ರಾಷ್ಟ್ರಪತಿಗಳು ಸೇರಿ ಸಾಂವಿಧಾನಿಕ ಹುದ್ದೆಗಳಿಗೆ ಕೊಡಬೇಕಾದ ಯಾವುದೇ ಗೌರವವನ್ನು ನೀಡದೆ ತಮ್ಮ ವ್ಯಕ್ತಿತ್ವ ನಗಣ್ಯ ಎಂಬುದನ್ನು ತಾವೇ ನಿರೂಪಿಸಿದ್ದಾರೆ. ವ್ಯಕ್ತಿತ್ವಹೀನ ವ್ಯಕ್ತಿಯ ಕೈಯಲ್ಲಿ ಕರ್ನಾಟಕದ ಅಧಿಕಾರ ಇರುವುದು ನಿಜಕ್ಕೂ ಕಳವಳಕಾರಿ. ಪರಿಶಿಷ್ಟ ವರ್ಗದ ಒಬ್ಬರು ಮಹಿಳೆಯ ಬಗ್ಗೆ ಈ ರೀತಿ ನಡೆದುಕೊಂಡಿರುವುದು ಖಂಡನೀಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here