ಕಲಬುರಗಿ: ವಿಧಾನ ಪರಿಷತ್ ನೂತನವಾಗಿ ಸದಸ್ಯರಾಗಿ ಪ್ರಪ್ರಥಮ ಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿದ ಜಗದೇವ ಗುತ್ತೇದಾರ ಅವರಿಗೆ ಯುವ ಕಾಂಗ್ರೆಸ್ ಕಾಳಗಿ ಅಧ್ಯಕ್ಷ ಶರಣು ಮಜ್ಜಗಿ ಅವರ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಜೆಸಿಬಿ ಮೂಲಕ ಬೃಹತ್ ಹೂ ಮಾಲೆ ಹಾಕಿ ಸ್ವಾಗತಿಸಲಾಯಿತು.
ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕ ಅಲ್ಲಮಪ್ರಭು ಪಾಟೀಲ, ಸುಭಾಷ ರಾಠೋಡ, ರಾಜಗೋಪಾಲ ರೆಡ್ಡಿ, ಶಿವಾನಂದ ಹೋನಗುಂಟಿ, ಚೈತನ್ ಗೋನಾಯಕ್, ಈರಣ್ಣ ಝಳಕಿ, ರಾಘವೇಂದ್ರ ಗುತ್ತೇದಾರ, ಅಭೀಷೇಕ ರಾಠೋಡ, ಸಾಗರ ದೋಡ್ಡಮನಿ, ದಿನೇಶ ಮೋಘಾ, ಪ್ರದೀಪ ಡೋಣ್ಣೂರ, ಪ್ರವೀಣ ನಾಮದಾರ, ಮಂಜು ಯಾಸಗಿ, ಆನಂದ ಮಗೊಂಡ, ಚಂದು ಕಂದಗುಲ್, ಮಡಿವಾಳ ಗುಂಡಗುರ್ತಿ, ಮುರಗೇಂದ್ರ ಭರತನೂರ, ಸದ್ದಾಂ ಕಲಾಹಿಪ್ಪರಗಿ, ಪುಷೋತ್ತಮ್ ಗುತ್ತೇದಾರ ಸೇರಿದಂತೆ ಮತ್ತಿತರ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಇದ್ದರು.