ಕಲಬುರಗಿ: ನಗರದ ದಕ್ಷಿಣ ಮತಕ್ಷೇತ್ರದ ಡ್ರಿಮ್ ಲೇಔಟನಲ್ಲಿ ಲಕ್ಷ್ಮೀ ಮಂದಿರದಿಂದ ಚಿಮ್ಮಲಗಿ ಲೇಔಟವರೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ 50.ಲಕ್ಷ ರೂ ವಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರಾಚಣ್ಣಗೌಡ ಪಾಟೀಲ, ರವಿ ವಿಭೂತಿ, ಶಿವಕುಮಾರ ಬಾಳಿ, ಧರ್ಮರಾಜ ಹೇರೂರ, ಜೆಇ ಶಾಂತಕುಮಾರ ನಂದೂರ, ಗುತ್ತಿಗೇದಾರ ಶಂಕರ ಜಾಧವ, ಶೀವುಕುಮಾರ ಕೊಣಿನ್, ಅಶೋಕರಾವ ಕುಲಕರ್ಣಿ, ಈರಣ್ಣ ದಂಡಿನ್, ರಾಜಶೇಖರ ಚಂದ, ಶಿವಾಜಿ ಪಂಡ್ರೆ ಸೇರಿದಂತೆ ಇತರರು ಇದ್ದರು.