ವಾಡಿ: ಕಲ್ಯಾಣ ಕರ್ನಾಟಕದ ಸೂಫಿಯಾಗಿರುವ ಹಜರತ್ ಖಾಜಾ ಸೈಯದ್ ಮೊಹಮ್ಮದ್ ಬಾದಶಾ ಖಾದ್ರಿ ಚಿಸ್ತಿ ಯಾಮನಿ ಖದೀರ್ (ರ.ಅ) ಹಲಕಟ್ಟಾ ದರ್ಗಾದ 47ನೇ ಉರ್ಸ್ ಇದೇ ಜು. 20 ಮತ್ತು 21 ರಂದು ಜರುಗಲಿದೆ.
ದರ್ಗಾದ ಪಿಠಾಧಿಪತಿ ಹಜರತ್ ಖಾಜಾ ಸೈಯದ್ ಅಬು ತುರಬ್ ಶಾ ಖಾದ್ರಿ ಚಿಸ್ತಿ ಯಮನಿ ಅವರು ನೇತೃತ್ವದಲ್ಲಿ 20 ರಂದು ಗಂಧ ಲೇಪನ್ (ಸಂದಲ್) ನಡೆಲಿದ್ದು, 19 ರಂದು ಸಂಜೆ 8:30ಕ್ಕೆ ಸರ್ವಧರ್ಮ ಸಮ್ಮೇಳನ ನಡೆಲಿದೆ.
21ರಂದು ದೀಪಾ ಮಹೋತ್ಸವ ಕಾರ್ಯಕ್ರಮ 22 ರಂದು ರಾತ್ರಿ 8:30 ಮಹೆಫಿಲ್ ಖುಲ್ ಕಾರ್ಯಕ್ರಮ ಜರುಗಲಿದೆ ಎಂದು ದರ್ಗಾದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.