ಕಲಬುರಗಿ : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಲ್ಯಾಣ ಕರ್ನಾಟಕ ಜಿಲ್ಲಾ ಮಟ್ಟದ ಪದಾಧಿಕಾರಿಗಳು ನೇಮಕಗೊಂಡಿದ್ದಾರೆ.
ಗಂಗಾಧರ ಬಿ.ಸ್ವಾಮಿ (ಜಿಲ್ಲಾ ಅಧ್ಯಕ್ಷರು), ಮೊಹಮ್ಮದ್ ಆರೀಫ್ ಹುಸೇನ್, ವಿಲಾಸ ಜಿ. ಬೀದರಕರ್ (ಉಪಾಧ್ಯಕ್ಷರು), ಸಂಜು ಹೊಡಲಕರ್ (ಕಾರ್ಯದರ್ಶಿ), ಪ್ರಕಾಶ ಗಾಣಗಾಪೂರ (ಸಹ ಕಾರ್ಯದರ್ಶಿ), ಮೋಹಮ್ಮದ್ ಶಮಶೇರ್ (ಸಂಘಟನಾ ಕಾರ್ಯದರ್ಶಿ), ಸಿದ್ದರಾಮ ಬಿ.ಪೂಜಾರಿ(ಖಜಾಂಚಿ), ಸಿದ್ದಲಿಂಗ ತಳವಾರ (ಕೋಶಾಧ್ಯಕ್ಷ)ಯನ್ನಾಗಿ ನೇಮಕ ಮಾಡಲಾಗಿದೆ ಎಂದು ಕ.ಕರ್ನಾಟಕ ವಿಭಾಗ ಅಧ್ಯಕ್ಷ ಮೊಹಮ್ಮದ್ ಶಹಬುದ್ದೀನ್, ಉಪಾಧ್ಯಕ್ಷ ಶಿವಶರಣಪ್ಪ ಸುಬೇದಾರ, ಕಾರ್ಯದರ್ಶಿ ಅಶೋಕ ಗೋಖಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.