ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ವಿಭಾಗದಲ್ಲಿ ಯಡ್ರಾಮಿ ತಾಲ್ಲೂಕಿನ ವಡಗೇರಾ ಗ್ರಾಮದ ಯುವ ಸಾಹಿತಿ ಮತ್ತು ಕವಿ, ವಿಮರ್ಶಕ ಡಾ. ಚಾಂದಸಾಬ್ ಮುಜಾವರ ಅವರು ಪಿಎಚ್. ಡಿ ಪದವಿಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಅವರಿಗೆ ಇಂದು ನಡೆದ 41ನೇ ಘಟಿಕೋತ್ಸವದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ್ ಮತ್ತು ಪ್ರೊ, ವಿ. ಟಿ ಕಾಂಬಳೆ ಅವರು ಪದವಿಯನ್ನು ಪ್ರಧಾನ ಮಾಡಿದರು.
ಡಾಕ್ಟರೇಟ್ ಪದವಿ ಪಡೆದಿರುವ ಚಾಂದಸಾಬ್ ಅವರಿಗೆ ಸ್ನೇಹಿತರು ಬಂದು ಬಳಗ ಹಲವು ಗಣ್ಯರು ಅಭಿನಂದನೆಗಳು ಸಲ್ಲಿಸಿದ್ದಾರೆ.