ಕಲಬುರಗಿ: ನಗರದ ಹೊರ ವಲಯದ ಬೀದರ್ರಸ್ತೆಯಲ್ಲಿ ಬರುವತಾವರಗೇರಾಕ್ರಾಸ್ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಏಷಿಯನ್ ಫನ್ವಲ್ರ್ಡಉದ್ಘಾಟನಾ ಸಮಾರಂಭ ಆ. 15ರಂದು ಸಂಜೆ 7 ಗಂಟೆಗೆಜರುಗಲಿದೆ ಎಂದು ಫನ್ ವ್ಯವಸ್ಥಾಪಕ ನಿರ್ದೇಶಕ ಮೊಹ್ಮದ್ ರಫಿಕುದ್ದೀನ್ ತಿಳಿಸಿದರು.
ಹಜರತ್ ಖ್ವಾಜಾ ಬಂದಾ ನವಾಜ್ ದರ್ಗಾದ ಡಾ.ಮೊಹ್ಮದ್ ಗೇಸುದರಾಜ್ ಖುಸ್ರೋ ಹುಸೇನಿ ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉದ್ಘಾಟಿಸಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಈಶ್ವರ ಖಂಡ್ರೆ, ಶರಣಬಸಪ್ಪ ದರ್ಶನಾಪುರ, ರಹೀಂ ಖಾನ್, ಸಂಸದ ಡಾ.ಉಮೇಶ ಜಾಧವ, ಶಾಸಕರಾದ ಕನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮಡು, ಡಾ.ಅಜಯಸಿಂಗ್, ಬಿ.ಆರ್.ಪಾಟೀಲ, ಎಂ.ವೈ.ಪಾಟೀಲ, ಡಾ.ಅವಿನಾಶ ಜಾಧವ, ಶಶೀಲ್ ಜಿ. ನಮೋಶಿ, ಬಿ.ಜಿ. ಪಾಟೀಲ, ಚಂದ್ರಕಾಂತ ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಸುನಿಲ ವಲ್ಯಾಪುರೆ, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಮೇಯರ್ ವಿಶಾಲ ದರ್ಗಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಆರು ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ಈ ಫನ್ವಲ್ರ್ಡನಲ್ಲಿ 50 ಬಗೆಯ ರೈಡರ್ಗಳಿದ್ದು, ಶುದ್ಧ, ಸಸ್ಯಹಾರ ಹಾಗೂ ಮಾಂಸಹಾರದ ಫುಡ್ ಕೋರ್ಟ್ಗಳಿವೆ. ಮಕ್ಕಳಿಗಾಗಿ ವಿವಿಧ ಬಗೆಯ ಆಟಿಕೆ, ತಿಂಡಿ, ತಿನಿಸು ಇಲ್ಲಿದೊರೆಯಲಿದ್ದು, ಉಚಿತ ಪ್ರವೇಶವಿರುತ್ತದೆ. ರೈಡ್ ಮಾಡಿದಾಗ ಮಾತ್ರ ಹಣ ಪಾವತಿಸಬೇಕಾಗುತ್ತದೆ ಎಂದರು.
ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ದೊಡ್ಡ ಫನ್ ವಡ್ರ್ಲ ನಿರ್ಮಾಣವಾಗಿದೆ. ಇದರಿಂದಾಗಿ ದೂರದ ಹೈದರಾಬಾದ್ ಇಲ್ಲವೇ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ. ಇನ್ನೆರಡು ತಿಂಗಳಲ್ಲಿ ವಾಟರ್ ಪಾರ್ಕ್ಕೂಡ ಸಿದ್ಧಗೊಳ್ಳಲಿದೆ. -ಮೊಹ್ಮದ್ ರಫಿಕುದ್ದೀನ್, ವ್ಯವಸ್ಥಾಪಕ ನಿರ್ದೇಶಕ, ಏಷಿಯನ್ ಫನ್ವಲ್ರ್ಡ, ಕಲಬುರಗಿ
ಆರಿಫ್ ಅಲಿ ಮಣಿಯಾರ್, ಫರ್ಜ್ರಫಿ, ಡಾ. ಸಲ್ಮಾನ್ ಪಟೇಲ್, ಆಬಿದ್ ಅಲಿ ಮಣಿಯಾರ್ಇತರರಿದ್ದರು.