ಮತ್ತೆ ಕಲ್ಯಾಣ ಬೈಕ್ ರ್ಯಾಲಿಗೆ ಡಾ. ಅಪ್ಪ ಚಾಲನೆ

0
168

ಕಲಬುರಗಿ: ಸಾಣೆಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ರ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಮತ್ತೆ ಕಲ್ಯಾಣ ಕಾರ್ಯಕ್ರಮ ನಾಳೆ ಆ. 29ರಂದು ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬೆಳಗ್ಗೆ 11 ಗಂಟೆಯಿಂದ ಜರುಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಕಲಬುರಗಿ ಮತ್ತೆ ಕಲ್ಯಾಣ ಸಮಿತಿ ವತಿಯಿಂದ ಬೈಕ್ ರ್ಯಾಲಿ ನಡೆಸಲಾಯಿತು.

Contact Your\'s Advertisement; 9902492681

ಶರಣಬಸವೇಶ್ವರ ಸಂಸ್ಥಾನದ ಡಾ. ಶರಣಬಸವಪ್ಪ ಅಪ್ಪ ಚಾಲನೆ ನೀಡಿದರು. ಮತ್ತೆ ಕಲ್ಯಾಣ ಸಮಿತಿ ಅಧ್ತಕ್ಷ ಶರಣು ಪಪ್ಪಾ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಯಿತು. ರವೀಂದ್ರ ಶಾಬಾದಿ, ಪ್ರಭುಲಿಂಗ ಮಹಾಗಾಂವಕರ್, ಸುನಿಲ್ ಹುಡಗಿ, ಸತೀಶ ಸಜ್ಜನ್, ಮಹಾಂತೇಶ ಕಲ್ಬುರ್ಗಿ, ಅಯ್ಯನಗೌಡ ಪಾಟೀಲ, ನಳಿನಿ ಮಹಾಗಾಂವಕರ್, ಮಾಲತಿ ರೇಷ್ಮಿ, ದತ್ತಾತ್ರೇಯ ಇಕ್ಕಳಕಿ, ಆರ್.ಜಿ. ಶೆಟಗಾರ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ನಂತರ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸಾವಿರಾರು ಬೈಕ್ ಸವಾರರು ಬೈಕ್ ರ್ಯಾಲಿ ನಡೆಸಿ ಜಾಗೃತಿ ಮೂಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here