ಕಲಬುರಗಿ: ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬಳ ಮೇಲೆ ಅಮಾನುಷ್ಯ ಕೃತ್ಯ ನಡೆಸಿ ಕಂಬಕ್ಕೆ ಕಟ್ಟಿ ವಿವಸ್ತ್ರಗೊಳಿಸಿ ಚಿತ್ರ ಹಿಂಸೆ ಕ್ರೌರ್ಯ ಮೆರೆದ ಪುಂಡರನ್ನು ಗಡಿಪಾರು ಮಾಡಬೇಕೆಂದು ಭಾರತೀಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಾವತಿ ಎನ್. ಮಾಲಿಪಾಟೀಲ ಅವರು ಆಗ್ರಹಿಸಿದ್ದಾರೆ.
ಮಗನ ಪ್ರೇಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ಕುಟುಂಬದ ಮನೆ ದ್ವಂಸಮಾಡಿ ಸಿಕ್ಕಪಟ್ಟೆ ಹಲ್ಲೆ ಮಾಡಿರುವುದನ್ನು ಇಡಿ ಮಾನವ ಕುಲವೆ ತಲೆ ತಗ್ಗಿಸುವಂತಹ ಘಟನೆ ಇದಾಗಿದ್ದು, ತಪ್ಪಿಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಆ ನೊಂದ ಕುಟುಂಬಕ್ಕೆ ತಕ್ಷಣ ರಾಜ್ಯ ಸರಕಾರ ಪರಿಹಾರ ನೀಡಬೇಕು.
ಕುಟುಂಬದವರಿಗೆ ಸೂಕ್ತ ಪೆÇೀಲಿಸ್ ಬಂದೊಬಸ್ತ ನೀಡಬೇಕು. ಮತ್ತು ಜೀವ ಭಯದಿಂದ ಓಡಿಹೋದ ಆ ಪ್ರೇಮಿಗಳನ್ನು ರಕ್ಷಿಸಿ ಯಾವುದೇ ದುರ್ಗಘಟನೆ ಸಂಬಂವಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರಕಾರಕ್ಕೆ ಮಾಲಿಪಾಟೀಲ ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.