ಕಲಬುರಗಿ: ನಗರದ ಮುಖ್ಯ ರಸ್ತೆಯಲ್ಲಿರುವ ಅಂಜುಮನ್ ತರಕಿ ಉರ್ದು ಅಂಜುಮನ್ ಕಾಂಪ್ಲೆಕ್ಸ್ ನ ಖಾಜಾ ಬಂದೆ ನವಾಜ್ ಸಭಾಂಗಣದಲ್ಲಿ ಖ್ಯಾತ ಉರ್ದು ಸಾಹಿತಿ ಮತ್ತು ಕವಿ ವಾಜಿದ್ ಅಖತರ್ ಸಿದ್ದಿಕಿ ಅವರ ನಾಲ್ಕನೆ ಕೃತಿಯನ್ನು ಶಾಸಕಿ ಕನೀಜ್ ಫಾತಿಮಾ ಅವರು ಬಿಡುಗಡೆ ಮಾಡಿದರು.
ಶಾಸಕ ಶಶೀಲ್ ನಮೋಶಿ, ಡಾ. ರೌಫ್ ಖೈರ್, ಹೈದರಾಬಾದ, ಮೆಹಬೂಬ್ ಖಾನ್ ಅಜ್ಜರ್, ಅಮೀನ್ ಮುಕ್ತಾರ್ ಅಹಮದ್, ಸೈಯದ್ ನಜೀರ್ ಮುತವಲ್ಲಿ, ಅಬ್ದುಲ್ ವಾಹಬ್, ಶೇಕ್ ಮುಜೀಬ್, ಡಾ.ಜಹೀರ್ ಶೇಖ, ಮನಜೂರ ವಿಕಾರ, ಸಾಜೀದ್ ಅಲಿ ರಂಜೋಳಿ, ಡಾ.ಪೀರ್ ಜಾದ ಫಹಿಮುದ್ದೀನ್ ಸೇರಿದಂತೆ ಇತರರು ಇದ್ದರು.