ಕಲಬುರಗಿ: ಯುಗಾದಿ ಹಬ್ಬದಂದು ವಿಜಯನಗರ ಕಾಲೋನಿಯಲ್ಲಿ ಶ್ರೀ ಮರಗಮ್ಮ್ ಮಹಾಲಕ್ಷ್ಮಿ ದೇವರಿಗೆ ಬೆಳ್ಳಿ ಮುಖ ಹಸ್ತ ಹಾಗೂ ಬಂಗಾರದ ನತ್ತು ಮಾಡಿಸಿ ದೇವಿಗೆ ಅಲಂಕಾರ ಮಾಡಲಾಯಿತು.
ನಂತರ ಮಹಿಳೆಯರನ್ನು ಸನ್ಮಾನಿಸಲಾಯಿತು. ನೀಲಮ್ಮ ತಡ್ಕಲ್, ಲಷ್ಮಿಬಾಯಿ ಗುಂಡೆ, ಶಶಿಕಲಾ ಮಠಪತಿ, ಮಲ್ಲಮ್ಮ ಟೀಚರ್, ಸುಮಂಗಲ ತಲಾಟಿ, ಶೋಭಾ ಪೂಜಾರಿ, ಶಾಂತಾಬಾಯಿ ಗೌಳಿ, ಕಲಾವತಿ ಗೌಳಿ, ಗೋದಾವರಿ ಪಾಟೀಲ್ ಇವರು ಉಪಸ್ಥಿತರಿದ್ದರು.