ಕಲಬುರಗಿ: ಜಗತ್ತಿನಲ್ಲಿ ವೈಜ್ಞಾನಿಕ, ವೈಚಾರಿಕ ಚಿಂತನೆ ಧರ್ಮವನ್ನು ಬೋಧಿಸಿ ಶಾಂತಿ ಮತ್ತು ಅಹಿಂಸೆಯನ್ನು ಮೊಟ್ಟಮೊದಲು ಜಗತ್ತಿಗೆ ಬೋಧಿಸಿದ್ದು ಬುದ್ಧ ಎಂದು ಚಿಂತಕ,ಸಾಹಿತಿ ಡಾ.ಪ್ರಭು ಖಾನಾಪುರೆ ನುಡಿದರು.
ಕಲಾ ಮಂಡಳದಲ್ಲಿ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕøತಿಕ ಪರಿಷತ್ತು ಏರ್ಪಡಿಸಿದ್ದ ರಾಜ್ಯ ಘಟಕವ ನ್ನು ಉದ್ಘಾಟಿಸಿ ಮಾತನಾಡಿದರು.ಅವರು ಆಸ್ತಿತ್ವ ಅನಸ್ತಿತ್ವವನ್ನು ಬಿಟ್ಟು ಮಧ್ಯ ಮಾರ್ಗವನ್ನು ಹಿಡಿದನು. ಥೇರಿಗಾಥ ಎಂಬ ಎಪ್ಪತ್ತ್ಮೂರ ಮಹಿಳೆಯರು ಬೌದ್ಧ ಭಿಕ್ಷುಣಿಯರ ಸಾಹಿತ್ಯ ಬಂದರೂ ಚರ್ಚೆ ಆಗಿಲ್ಲ. ಕೊಲ್ಲುವುದು ಧರ್ಮ ಸಾಹಿತ್ಯ ಬುದ್ಧನದಲ್ಲ;ಗೆಲ್ಲುವು ದಾಗಿತ್ತು.ಮೂರ್ತಿಗಳ ಪೂಜೆ ಆಚರಣೆ ಅಲ್ಲ ತತ್ತ್ವ ವಿ ಚಾರಗಳನ್ನು ಚಿಂತಿಸಬೇಕು ಇವತ್ತು ಬುದ್ಧನ ಚಿಂತನೆ ಅವಶ್ಯ ಎಂದರು.
ಮುಖ್ಯ ಅತಿಥಿಯಾದ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಲಿಂಗಣ್ಣ ಗೋನಾಲ ಧರ್ಮ ಸಂಘರ್ಷದಲ್ಲಿ ಬೌದ್ಧ ಧಮ್ಮ ಅವಶಾನ ಹೊಂದಿದೆ.ಇಂದಿನ ದಿನಗಳಲ್ಲಿ ಜಾತಿಧರ್ಮಕ್ಕೆ ಬೆನ್ನಟ್ಟಿಕೊಂಡಿದ್ದರಿಂದ ಸಾಹಿತ್ಯ ಧರ್ಮ ಸಾಮರಸ್ಯ ಬೆಸೆಯುತ್ತದೆಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡರು ಇಲ್ಲ ದರ ಬಗ್ಗೆ ಯೋಚಿಸದೇ ಇರುವುದರ ಬಗ್ಗೆ ಚಿಂತಿಸುವು ದೇ ಬೌದ್ಧ ಧರ್ಮವಾಗಿದೆ.ಸಮಾನತೆಯ ಧರ್ಮವಾಗಿ ದೆ.ಸಾಹಿತ್ಯದ ಮೂಲಕ ಚಿಂತನೆ ಬುದ್ಧ ನಮಗೆ ಅವಶ್ಯ ವಾಗಿದೆ ಎಂದರು.
ಹಿರಿಯ ಸಾಹಿತಿ ವಿ.ಆರ್.ಚಾಂಬಾಳ ಅವರು ಪ್ರಜಾ ಪ್ರಭುತ್ವ ಮತ್ತು ಬುದ್ಧ ಪ್ರಭುತ್ವ ಅವಶ್ಯವೆಂದರು.ಅಧ್ಯ ಕ್ಷತೆಯನ್ನು ಸಂಸ್ಥಾಪಕ ಅಧ್ಯಕ್ಷರಾದ ಸುರೇಶ ಎಸ್. ಕಾನೇಕರ್ ಬೀದರದಿಂದ ಚಾಮರಾಜನಗರದವರೆಗೆ ರಾಜ್ಯದಿಂದ ಗ್ರಾಮೀಣದವರೆಗೆ ಪರಿಷತ್ತು ಕಟ್ಟಬೇಕಾ ಗಿದೆ ಎಂದರು.
ಸಿದ್ದಾರ್ಥ ಬುದ್ಧ ವಿಹಾರದ ಸಂಘಾನಂದ ಬಂತೇಜಿ ಸಾನಿಧ್ಯ ವಹಿಸಿ ಸಕಲ ಜೀವಿಗಳಿಗೆ ಒಳ್ಳೆಯ ಕೆಲಸ ಮಾಡಲಿ ಎಂದು ಆಶೀರ್ವಚನ ನೀಡಿದರು.
ಸಂತೋಷಕುಮಾರ ಕರಹರಿ ಪ್ರಾರ್ಥಿಸಿದರು. ಬೌದ್ಧ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ಗವಿ ಸಿದ್ಧಪ್ಪ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಆಡಿದರು.ಡಾ.ಚಿದಾನಂದ ಕುಡ್ಡನ್ನ ನಿರೂಪಿಸಿದರು.ಡಾ.ಸಿದ್ದಪ್ಪ ಹೊಸಮನಿ ವಂದಿಸಿದರು.
ಬೀದರ ಜಿಲ್ಲೆಗೆ ಡಾ.ಸಂಜುಕುಮಾರ ನಡುಕರ,ಯಾದ ಗಿರಿ ಜಿಲ್ಲೆಗೆ ಸಾಯಿಬಾಬಾ,ಕಲಬುರಗಿ ಜಿಲ್ಲೆಗೆ ರಾಯಚೂರು ಜಿಲ್ಲೆಗೆ ಡಾ.ಶರಣಪ್ಪ ಚಲವಾದಿ ಅವರ ನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.ಡಾ.ರಾಜಕು ಮಾರ ಮಾಳಗೆ, ಡಾ.ಕೆ.ಎಸ್.ಬಂಧು,ಲಕ್ಷ್ಮಣ, ಡಾ.ರಾಜಶೇಖರ ಮಾಂಗ್,ರಾಘವೇಂದ್ರ ಫರಹತಬಾದಕರ್, ಡಾ.ಪ್ರದೀಪ ಕಡೂನ್, ಮಹಾಲಿಂಗ ದೇವರು,ಸವಿತಾ ಶಿವಶರಣಪ್ಪ,ರಾಜಕು ಮಾರ ಧುಮ್ಮನಸೂರ,ಡಾ.ಪೀರಪ್ಪ ಸಜ್ಜನ,ಅರವಿಂದ ಮದನಕರ ,ಡಾ. ಸುನೀಲ ಜಾಬಾದಿ,ಅಂಬಾರಾಯ ಲೇಂಗಟಿ,ಡಾಕಪ್ಪ ಮೋತಿಲಾಲ್,ಗುಂಡಪ್ಪ ಹೊಸಮನಿ, ತಿಪ್ಪಣ್ಣ ತೇಲಂಗ ಇತರರಿದ್ದರು.