ವಿಶ್ವಗುರು ಬಸವಣ್ಣ ಹೇಮರೆಡ್ಡಿ ಮಲ್ಲಮ್ಮ ಅಕ್ಕಮಹಾದೇವಿ ಜಯಂತಿ ಭಿತ್ತಿ ಪತ್ರಗಳ ಬಿಡುಗಡೆ

0
61

ಹುಣಸಗಿ: ಪಟ್ಟಣ ಮಹಾದೇವಪ್ಪ ಸಾಹುಕಾರ್ ಬಳಿ ಮಂಗಲ ಭವನದಲ್ಲಿ ಜೂನ್ 1 ರಂದು ಹಮ್ಮಿಕೊಂಡಿರುವ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ,ಹೇಮರೆಡ್ಡಿ ಮಲ್ಲಮ್ಮ,ವೈರಾಗ್ಯ ನಿಧಿ ಅಕ್ಕಮಹಾದೇವಿಯವರ ಜಯಂತಿ ಮಹೋತ್ಸವ ಹಾಗೂ ವಿವಿಧ ರಂಗಗಳಲ್ಲಿನ ಸಾಧಕರ ಸನ್ಮಾನ ಸಮಾರಂಭದ ಆಮಂತ್ರಣ ಪತ್ರಿಕೆ ಹಾಗೂ ಭಿತ್ತಿ ಪತ್ರಗಳನ್ನು ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಬಳಿಯ ಶ್ರೀ ಮಲ್ಲಯ್ಯನ ದೇವಸ್ಥಾನದಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಸಲಾಯಿತು.

ಕೊಡೆಕಲ್ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ,ಮುದನೂರ ಕಂಠಿ ಮಠದ ಶಾಂತ ಮಲ್ಲಿಕಾರ್ಜುನ್ ಶಿವಾಚಾರ್ಯರ ಸಾನಿಧ್ಯದಲ್ಲಿ ಹಾಗೂ ಶ್ರೀ ಚೆನ್ನಯ್ಯ ಸ್ವಾಮಿ ಹಿರೇಮಠ್, ಸಿದ್ದಣ್ಣ ಸಾಹು ಮಲಗಲದಿನ್ನಿ, ಶರಣು ಸಾಹು ದಂಡಿನ, ಸಿದ್ದು ಸಾಹು ಮುದಗಲ್, ನಿಂಗಣ್ಣ ಸಾಹು ಬಳಿ, ಬಸವರಾಜ ಬಳಿ, ಬಸಲಿಂಗಯ್ಯ ಹಿರೇಮಠ್, ರಾಜಶೇಖರ್ ದೇಸಾಯಿ ಬೈಲಕುಂಟಿ,ಬಸವರಾಜ ಪಡಶೆಟ್ಟಿ,ಮಹಾಂತೇಶ್ ಮಲಗಲದಿನ್ನಿ,ಮಲ್ಲಣ್ಣ ಸಾಹುಕಾರ, ಬಸವರಾಜ ಸಜ್ಜನ, ಶಾಂತಪ್ಪ ಬಾಕ್ಲಿ, ಬಸವರಾಜ್ ಸಜ್ಜನ್, ರಾಜು ಮಲಗಲದಿನ್ನಿ, ಸಿದ್ದನಗೌಡ ಬಿರಾದಾರ ದೇವೆಗೌಡ ಗೆದ್ದಲಮರಿ,ಪ್ರಭುಗೌಡ ಪೂತರೆಡ್ಡಿ ಸೇರಿದಂತೆ ಅನೇಕರ ಉಪಸ್ಥಿತಿಯಲ್ಲಿ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಸಂಘಟನೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ ಸೇರಿದಂತೆ ಸಂಘದ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here