ಸುರಪುರ: ತಾಲೂಕ ನೇಕಾರರ ಸೌಹಾರ್ದ ಸಹಕಾರಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.
ನಗರದ ತಿಮ್ಮಾಪುರದ ಚೌಡೇಶ್ವರಿ ದೇವಸ್ಥಾನದಲ್ಲಿನ ಸಹಕಾರಿ ಸಂಘದ ಕಚೇರಿಯಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ಸಹಕಾರಿ ಸಂಘದ ಅಧ್ಯಕ್ಷರಾಗಿ ವೀರಸಂಗಪ್ಪ ಎಸ್.ಹಾವೇರಿ,ಉಪಾಧ್ಯಕ್ಷರಾಗಿ ಚನ್ನಮಲ್ಲಿಕಾರ್ಜುನ ಎಸ್.ಗುಂಡಾನೂರ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರಾಗಿ ಲಿಂಗಣ್ಣ ಜಿ.ರಾಯಚೂರಕರ್,ಶ್ರೀನಿವಾಸ ವಿ.ಪಾಣಿಭಾತೆ,ಸಂಗಪ್ಪ ಬಿ.ಅಡ್ಡಿ,ಹಣಮೇಶಗೌಡ ಹೆಚ್.ಪೊಲೀಸ್ ಪಾಟೀಲ್,ಶ್ರೀನಿವಾಸ ವಿ.ಬಲಪುರ,ಮಲ್ಲಿಕಾರ್ಜುನ ಸಿ.ಚಟ್ಟಿ,ಹಣಮೇಶ ಡಿ.ಹಾವೇರಿ,ಚನ್ನಪ್ಪ ಬಿ.ಕಡದರಾಳ,ಬಸ್ಸಮ್ಮ ಎಸ್.ಕರಡಕಲ್,ನಾಗಮ್ಮ ಬಿ.ಜಾಲಿಗಿಡ ಹಾಗೂ ಆನಂದಮ್ಮ ವಾಯ್.ದಾಸರ ನೇಮಕಗೊಂಡರು.ನೂತನವಾಗಿ ನೇಮಕಗೊಂಡ ಅಧ್ಯಕ್ಷ,ಉಪಾಧ್ಯಕ್ಷರಿಗೆ ಎಲ್ಲರು ಸನ್ಮಾನಿಸಿ ಗೌರವಿಸಿದರು.