ನಾಯಿ ಕಡಿತಕ್ಕೆ ಒಳಗಾದ ಬಾಲಕಿ ಕುಡುಂಬಕ್ಕೆ ಪರಿಹಾರ ಚೆಕ್ ವಿತರಣೆ

0
25

ಶಹಾಬಾದ: ನಗರದಲ್ಲಿ ಐದಾರು ಜನರಿಗೆ ಬೀದಿ ಹಾಗೂ ಸಾಕು ನಾಯಿಗಳ ಕಡಿತದಿಂದ ಸಾರ್ವಜನಿಕರು ಭಯಬೀತರಾಗಿದ್ದಾರೆ.ಈ ಮಧ್ಯೆ ನಾಯಿ ಕಡಿತಗೊಳಗಾದ ರಾಮಮೊಹಲ್ಲಾದ 8 ವರ್ಷದ ಬಾಲಕಿ ದೀಪಾಲಿ ನಾಗರಾಜ ಕಣ್ಣಿನ ಭಾಗದಲ್ಲಿ ಗಂಭೀರವಾದ ಗಾಯವಾಗಿದ್ದರಿಂದ ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾರ್ವಜನಿಕರು ನಾಯಿ ಕಡಿತದಿಂದ ನಗರದಲ್ಲಿ ಆತಂಕ ಮನೆಮಾಡಿದೆ. ಸುಮಾರು ಐದಾರು ಜನರಿಗೆ ನಾಯಿಗಳು ಕಚ್ಚಿವೆ.ಅಲ್ಲದೇ 8 ವರ್ಷದ ಬಾಲಕಿಗೆ ಕಣ್ಣಿಗೆ ಭಾಗಕ್ಕೆ ಕಚ್ಚಿ ಗಂಬೀರ ಗಾಯಗೊಳಿಸಿರುವ ಬಗ್ಗೆ ಶಾಸಕ ಮತ್ತಿಮಡು ಅವರಿಗೆ ತಿಳಿಸಿದ್ದಾರೆ.ತಕ್ಷಣವೇ ವಿಷಯದ ಗಂಭೀರತೆಯನ್ನು ಅರಿತು ಶಾಸಕರು ನಗರಸಭೆಯ ಪೌರಾಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ತಕ್ಷಣ ಕ್ರಮಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

Contact Your\'s Advertisement; 9902492681

ಅಲ್ಲದೇ ಬಾಲಕಿಯ ಆರೋಗ್ಯವನ್ನು ವಿಚಾರಿಸಲು ತಿಳಿಸಿದ್ದಾರೆ. ಅಲ್ಲದೇ ಅವರಿಗೆ ನಾವಿದ್ದೆವೆ ಎಂದು ಧೈರ್ಯ ತುಂಬಿ ಎಂದು ತಿಳಿಸಿದ್ದಾರೆ.ಅದರಂತೆ ಪಿಡಿ ಮುನ್ನಾವರ್,ತಹಸೀಲ್ದಾರ ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್, ಆಪ್ತ ಸಹಾಯಕ ದತ್ತು ಪವಾರ ಅವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.ಅಲ್ಲದೇ ನಾಯಿ ಕಡಿತಗೊಳಗಾದ ಬಾಲಕಿತ ಪೋಷಕರಿಗೆ ನಗರಸಭೆಯಿಂದ ಐದು ಸಾವಿರ ರೂ. ಪರಿಹಾರ ಚೆಕ್ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here