ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಮೀನಾಕ್ಷಿ ಹೊಸಮನಿ ಆಯ್ಕೆ

0
153

ಶಹಾಪುರ : ತಾಲೂಕಿನ ಹತ್ತಿಗೂಡುರ ಗ್ರಾಮದ ಅಂಬೇಡ್ಕರ್ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮೀನಾಕ್ಷಿ ಆರ್. ಹೊಸಮನಿಯವರು ಸಾರ್ವಜನಿಕ ಶಿಕ್ಷಣ ಇಲಾಖೆ ಯಾದಗಿರಿ ಜಿಲ್ಲೆಯಿಂದ ಕೊಡಮಾಡುವ 2024 – 25 ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೆಪ್ಟಂಬರ್ 5 ರಂದು ಯಾದಗಿರಿಯಲ್ಲಿ ಹಮ್ಮಿಕೊಂಡಿರುವ ಶಿಕ್ಷಕರ ದಿನಾಚರಣೆ ದಿನದಂದು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಲಿದೆ.ಮೀನಾಕ್ಷಿ ಆರ್.ಹೊಸಮನಿಯವರ ಕ್ರಿಯಾಶೀಲತೆ ಹಾಗೂ ಅವರಿಗಿರುವ ಶಾಲೆ ಹಾಗೂ ಸಾಮಾಜಿಕ ಕಳಕಳಿಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಿದ್ದಾರೆ.

Contact Your\'s Advertisement; 9902492681

ಮಾಜಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ,ಶಿವಣ್ಣ ಇಜೇರಿ,ದಲಿತ ಪರ ಬಂಡಾಯ ಸಾಹಿತಿ ಬುದ್ಧ ಘೋಷ ದೇವೇಂದ್ರ ಹೆಗಡೆ,ಡಾ. ಬಸವರಾಜ್ ಕಲೆಗಾರ,ಸಂಶೋಧಕ ಸಾಯಿಬಾಬಾ ಅಣಬಿ,ಪತ್ರಕರ್ತರಾದ ಪ್ರಕಾಶ್ ದೊರೆ ಮುಡಬೂಳ,ಬಸವರಾಜ್ ಸಿಣ್ಣೂರ,ತಿಪ್ಪಣ್ಣ ಕ್ಯಾತನಾಳ ಸೇರಿದಂತೆ ಹಲವರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here