ಹುಬ್ಬಳ್ಳಿ; ವರೂರ ಕ್ಷೇತ್ರದಲ್ಲಿ ನಡೆದ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಮತ್ತು ಭಗವಾನ ಪಾರ್ಶ್ವನಾಥ ತೀರ್ಥಂಕರರ ಮಹಾಮಸ್ತಾಕಾಭೀಷೇಕ ಸಂದರ್ಭದಲ್ಲಿ ಹಿರಿಯ ಐ.ಎ.ಎಸ್.ಅಧಿಕಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್ ರವರಿಗೆ ಜೈನ್ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಯಿಸಲಾಯಿತು.
ಈ ಪ್ರಶಸ್ತಿಯು ವರೂರ ಕ್ಷೇತ್ರದ ಪರಮ ಪೂಜ್ಯ ರಾಷ್ಟ್ರಸಂತ ಆಚಾರ್ಯ 108 ಗುಣಧರನಂದಿ ಮಹಾರಾಜರ ಪಾವನ ಸಾನಿಧ್ಯ, ಮತ್ತು ಶ್ರೀ ಕ್ಷೇತ್ರ ಶ್ರವಣಬೆಳಗೋಳ ಜೈನ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತೀ ಸ್ವಾಮೀಜೀ ರವರ ದಿವ್ಯ ಸಾನ್ನಿಧ್ಯ ದಲ್ಲಿ ಲೋಕಸಭೆ ಸ್ಪಿಕರ ಓಂ ಬಿರ್ಲಾ ರವರು ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಶಸ್ತಿ ಪಡೆದ ಮನೋಜ್ ಜೈನ ರವರಿಗೆ ಶ್ರೀ ಕ್ಷೇತ್ರ ಶ್ರವಣಬೆಳಗೋಳದ ಜೈನ ಮಠದ ಶ್ರೀ ರಾಜೇಶ ಖನ್ನಾ ರವರು ಮತ್ತು ಕೆ.ಎಂ.ಡಿ.ಸಿ ಯ ನಿಕಟಪೂರ್ವ ನಿರ್ದೇಶಕರಾದ ಸುರೇಶ ಎಸ್.ತಂಗಾ ರವರು ಅಭಿನಂದನೆ ಸಲ್ಲಿಸಿದ್ದರು.