ಪೌರತ್ವ ತಿದ್ದುಪಡಿ ಮಸೂದೆಯ ಪ್ರತಿ ಸುಡುವ ಮೂಲಕ ಕ್ಯಾಂಪಸ್ ಫ್ರಂಟ್ ವತಿಯಿಂದ ಬೃಹತ್ ಪ್ರತಿಭಟನೆ

0
193

ಗಂಗಾವತಿ : ಪೌರತ್ವ ತಿದ್ದುಪಡಿ ಮಸೂದೆ (CAB) ಬಿಲ್ ಅನ್ನು ವಿರೋಧಿಸಿ ಜನ ವಿರೋಧಿ ಸರ್ಕಾರದ ವಿರುದ್ಧ ಬಿಲ್ ಪ್ರತಿಯನ್ನು ಸುಡುವುದರ ಮೂಲಕ ಶ್ರೀ ಕೃಷ್ಣ ದೇವರಾಯ ವೃತ್ತದಲ್ಲಿ ಪ್ರತಿಭಟಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ಸೈಯದ್ ಸರ್ಫಾರಜ್ NRC,CABಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಕ್ಯಾಬ್ ಬಿಲ್ ಎಂಬುವುದು ಸಂವಿಧಾನದ ಆರ್ಟಿಕಲ್ 14 ರ ಸಂಪೂರ್ಣವಾಗಿ ಉಲ್ಲಂಘನೆಯಾಗಿದೆ ಇಂತಹ ಬಿಲ್ಲುಗಳನ್ನು ಜಾರಿಗೆ ತಂದು ಅಮೀತ್ ಶಾ ಅವರು ಬೆಂಕಿಯಲ್ಲಿ ಕೈಯನ್ನು ಹಾಕುತ್ತಿದ್ದಾರೆ ಖಂಡಿತವಾಗಿ ಅವರ ಕೈ ಸುಡುವಂತದ್ದು ಎಂದು ಹೇಳಿದರು.

Contact Your\'s Advertisement; 9902492681

ಪ್ರತಿಭಟನೆಗೆ ಕಾರ್ಮಿಕರ ಸಂಘಟನೆಗ ಬೆಂಬಲ:
ಬಳಿಕ ಪ್ರಗತಿಪರ ಚಿಂತಕ ಭರದ್ವಜ್ ಮತ್ತು ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷರಾದ ಜಹೀರ್ ಅಬ್ಬಾಸ್ ಮಾತನಾಡಿ ಜನ ವಿರೋಧಿ ಕೇಂದ್ರ ಸರ್ಕಾರದ ಇಂತಹ ಬಿಲ್ಲುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಹಾಗು ಜನರಿಗೆ ಹೆಚ್ಚಾಗಿ ಜಾಗೃತಿಮೂಡಿಸುವ ಮೂಲಕ ಇಂತಹ ಸಂವಿಧಾನ ವಿರೋಧಿ ಬಿಲ್ಲುಗಳನ್ನು ಹಳ್ಳಕ್ಕೆ ಎಸೆಯಲಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ಸೈಯದ್ ಸರ್ಫಾರಜ್, ದಲಿತ ಮುಖಂಡರಾದ ಹನುಮಂತಪ್ಪ, ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷರಾದ ಜಹೀರ್ ಅಬ್ಬಾಸ್ ಮತ್ತು ಕ್ಯಾಂಪಸ್ ಫ್ರಂಟ್ ಜಿಲ್ಲಾ ಸಮಿತಿ ಸದಸ್ಯರಾದ ಇಮ್ರಾನ್,ಇರ್ಫಾನ್, ಅಥೀಕ್, ಹಾಗು ಊರಿನ ಪ್ರಜ್ಞಾವಂತ ನಾಗರಿಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here