ಬಸವ ಬೆಳಕು ಕಾರ್ಯಕ್ರಮಕ್ಕೆ ನಾಲವಾರದ ತೋಟೇಂದ್ರ ಸ್ವಾಮೀಜಿ

0
40

ಶಹಾಪುರ: ನಗರದ ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆಯ ವತಿಯಿಂದ ತಿಂಗಳ ಬಸವ ಬೆಳಕು -೯೪ ಬುದ್ಧ ವಿಹಾರದ ಹತ್ತಿರ ಇರುವ ಬಸವ ಬೆಳಗು ಕಚೇರಿಯ ಆವರಣದಲ್ಲಿ ಸಾಯಂಕಾಲ ೬.೩೦ ಕ್ಕೆ ನಡೆಯಲಿದೆ.

ಲಿಂಗೈಕ್ಯ ಸಿದ್ಧಲಿಂಗಪ್ಪ ಕಾಕನಾಳೆ ಭಾಲ್ಕಿ ಅವರ ಸ್ಮರಣೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಲವಾರದ ಪೂಜ್ಯ ಶ್ರೀ.ಡಾ. ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿಗಳು ಶರಣರ ಪರಂಪರೆ ಎಂಬ ವಿಷಯ ಕುರಿತು ಅನುಭಾವ ನೀಡಲಿದ್ದಾರೆ. ಅತಿಥಿಗಳಾಗಿ ಭಾಲ್ಕಿಯ ಶಾಂತಾ ಗಿರೀಶ್ ಭಂಡಾರಿಯವರು ಭಾಗವಹಿಸುವರು.

Contact Your\'s Advertisement; 9902492681

ಶರಣಕುಮಾರ ಜಾಲಹಳ್ಳಿ ಮತ್ತು ಚಂದ್ರಶೇಖರ ಗೋಗಿ ಅವರಿಂದ ವಚನ ಗಾಯನ ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here