ಕಲಬುರಗಿ: ಕೊರೋನಾ ವೈರಸ್ ಹರಡುವುದನ್ನು ತಡೆಯುವ ಮುಂಜಾಗ್ರತೆಯ ಕ್ರಮವಾಗಿ ದೇಶದ್ಯಾಂತ ಲಾಕ್ ಡೌನ್ ಘೋಷಣೆಯಾಗಿದೆ. ಕೂಲಿ ಕಾರ್ಮಿಕರು ಕೆಲಸವಿಲ್ಲದೇ, ಒಪ್ಪತ್ತಿನ ಗಂಜಿಗೂ ಪರದಾಡುವಂತಾಗಿದ್ದು, ಎಲ್ಲರೂ ಸಹಾಯ ಮಾಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಎಂದು ಚಿತ್ತಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರ ಸಂಘದ ವತಿಯಿಂದ 40 ಕ್ವಿಂಟಾಲ್ ಅಕ್ಕಿ, 4 ಕ್ವಿಂಟಾಲ್ ತೊಗರಿ ಬೇಳೆ, ಹಾಗೂ 2 ಕ್ವಿಂಟಾಲ್ ಎಣ್ಣೆಯನ್ನು ಚಿತ್ತಾಪುರ ತಹಸೀಲ್ದಾರ ಅವರ ಮೂಲಕ ಹಸಿದ ಜನರಿಗೆ ನೆರವು ನೀಡಿದ್ದಾರೆ. ಸಂಘದ ವರ್ತಕರ ಜನಪರ ಕಾಳಜಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.