ರಾಯಚೂರು: ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ರಾಯಚೂರುನಿಂದ ನೆರೆ ರಾಜ್ಯ ತೆಲಂಗಾಣಕ್ಕೆ ಇಂದಿನಿಂದ ಬಸ್ ಸಂಚಾರ ಪ್ರಾರಂಭಗೊಂಡಿದೆ.
ಕೇಂದ್ರ ಕಚೇರಿಯ ನಿರ್ದೇಶನದ ಮೇರೆಗೆ ನೆರೆಯ ತೆಲಂಗಾಣ ರಾಜ್ಯದ ವ್ಯಾಪ್ತಿಯ ಹೈದರಾಬಾದ್, ಗದ್ವಾಲ, ವನಪರ್ತಿ ಮತ್ತು ಐಜಿ ಕರ್ನೂಲ ಹಾಗೂ ಶ್ರೀಶೈಲವರೆಗೆ ಬಸ್ಗಳು ಸಂಚಾರ ಮಾಡಲಿವೆ. ಕೋವಿಡ್ ಮುಂಜಾಗೃತ ಕ್ರಮವಾಗಿ ಮಾರ್ಚ್ 23ರಿಂದ ಮೇ 3ರ ವರೆಗೆ ಗ್ರಾಮಾಂತರ ಸಾರಿಗೆ ಸೇರಿದಂತೆ ಎಲ್ಲಾ ಅಂತರ ರಾಜ್ಯ ಮತ್ತು ವೇಗದೂತ ಸಂಚಾರವನ್ನು ಸ್ಥಗಿತಗೊಳಿಸಿತ್ತು.
ಸಾರಿಗೆ ಇಲಾಖೆ ನಿರ್ದೇಶನದ ಮೇರೆಗೆ ರಾಯ ಚೂರು ನಿಂದ ಆಂದ್ರ ಪ್ರದೇಶ, ತೆಲಂ ಗಾಣಕ್ಕೆ ಬಸ್ ಸಂಚಾರ ಆರಂಬಿಸಿದೆ ಎಂದು ರಾಯ ಚೂರು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ವರದಿ: ಮುತ್ತಣ್ಣ ರಾಯಚೂರು