ಸುರಪುರ: ಸಮಗ್ರ ಭಾರತದ ಅಭೀವೃಧ್ಧಿ ಎಂಬುದು ಅದು ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿದರು. ನಗರದ ಕಾಂಗ್ರೆಸ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ತಳವರಗೇರಾ ಗ್ರಾಮದ ಹಲವಾರು ಬಿಜೆಪಿ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಸಂದರ್ಭದಲ್ಲಿ ಮಾತನಾಡಿ,ತಾವೆಲ್ಲರು ಮುಂದೆ ಬರುವ ಚುನಾವಣೆಯಲ್ಲಿ ಒಟ್ಟಗಿನಿಂದ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಜೊತೆಗೆ ಕಾಂಗ್ರೆಸ್ ಬೆಂಬಲಿಗ ಎಲ್ಲಾ ಅಭ್ಯಾರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ನಂತರ ದೇವಪ್ಪ ತಳವಾರಗೇರಿ, ಹೊನ್ನಪ್ಪ ಕಾಡಿಮಗೇರಿ, ದೇವಿಂದ್ರಪ್ಪ್ಪ ಚನ್ನಪಟ್ನ, ಮಲ್ಲಪ್ಪ ದೇವಿಕೇರಿ, ಬೈಲಪ್ಪ ಚನ್ನಪ್ಪಟ್ನ, ಮಲ್ಲಪ್ಪ ಚನ್ನಪಟ್ನ, ವಿರೇಶ ಪಾತ್ಲಿ, ಭೀಮಣ್ಣ ಪಾತ್ಲಿ, ಮಲ್ಲಿಕಾರ್ಜುನ ದೊಡ್ಡಮನಿ, ಶರಣಪ್ಪ ಕಾಡಿಮಗೇರಿ, ಮಲ್ಲಪ್ಪ ಜೂಟ್ಟರ್, ವಿರೇಶ ಕಾಡಿಮಗೇರಿ ಇನ್ನಿತರರನ್ನು ಪಕ್ಷದ ಶಾಲು ಹಾಕಿ ಧ್ವಜಾ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾಧ ರಾಜಾ ವೇಣುಗೊಪಾಲ ನಾಯಕ, ರಾಜಾ ಸಂತೋಷ ನಾಯಕ,ತಾಲೂಕು ಪಂಚಾಯತಿ ಸದಸ್ಯ ಬೈಲಪ್ಪಗೌಡ ವಾಗಣಗೇರಾ, ರಾಮಚಂದ್ರಪ್ಪ ದೊರಿ, ಶರಬಯ್ಯ ಸ್ವಾಮಿ, ನಾಗಪ್ಪ ಯಾದವ, ಚಂದ್ರಶೇಖರ ಸಾಹುಕಾರ, ಹಣಮಂತ ಬೆಂಗಳೂರ, ಮಹಾದೇವಪ್ಪ ಮೇಸ್ತ್ರಿ ಇನ್ನಿತರರು ಉಪಸ್ಥಿತರಿದ್ದವರು.