ಕಲಬುರಗಿ: ಜಿಲ್ಲೆಯ ಹಿರಿಯ ಉರ್ದು ಪತ್ರಿಕೆಯ ಸಂಪಾದಕ ಹಾಗೂ ಪತ್ರಕರ್ತರಾದ ಹಾಮಿದ್ ಅಕಮಲ್ ಅವರಿಗೆ ಕರ್ನಾಟಕ ಸೋಷಿಯಲ್ ಜಾಗೃತಿ ಫೋರಂ ವತಿಯಿಂದ ಕ್ಷೇತ್ರದಲ್ಲಿ 50 ವರ್ಷ ನಿರಂತರ ಸೇವೆ ಹಾಗೂ 70ನೇ ಜನ್ಮದಿನದ ಪ್ರಯುಕ್ತ ಸನ್ಮಾನಿಸಿ ಗೌರವಿಸಲಾಯಿತು.
ನಗರದ ಮೆಜೆಸ್ಟಿಕ್ ಫಂಕ್ಷನ್ ಹಾಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉತ್ತರ ಮತ ಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ, ಸಿರಾಜ್ ಬಾಬಾ ಜುನೈದಿ, ವಾಹಾಬ್ ಅದಾಲಿಬ್, ಅಬ್ದುಲ್ ಹಮಿದ್ ಅಕ್ಬರ್ , ಪ್ರೊ. ಅಬ್ದುಲ್ ಹಮಿದ್ ಅಕ್ಬರ್ ಶೇರವಾಡಿ, ಗಜಾನ್ಫರ್ ಇಕ್ಬಾಲ್, ಅಥರ್ ಬಾಬಾ, ಅಬ್ದುಲ್ ಜಬ್ಬಾರ್ ಗೊಲಾ, ಅಬ್ದುಲ್ ರಶೀದ್ ಅಕ್ಕಿ, ಯುಸೂಫ್, ಡಾ. ಅಬ್ದುಲ್ ರಹಮಾನ್ ಪಟೇಲ್ ಇದ್ದರು.
ಫೋರಂ ಅಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ, ನುಸರತ್ ಬೇಗಂ, ಮೋಹಿನೋದ್ದಿನ್ ಕಲ್ಯಾಣಕರ್, ಮನಜುರ್ ವಿಖಾರ್, ಸಿರಾಜ್ ವಿಖಾರ್, ಸಾದಿಕ್ ಅಲಿ, ಡಾ. ಅಬ್ದುಲ್ ಕರೀಮ್ ಬಾಬಾ, ಎಂ.ಕೆ ಡಾ. ಚಾಂದಾ ಹುಸೈನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.