ಸುರಪುರ: ಯಾದಗಿರಿ ತಾಲೂಕಿನ ಅಬ್ಬೆತುಮಕೂರ ಶ್ರೀ ಸದ್ಗುರು ವಿಶ್ವರಾಧ್ಯರ ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ರಂಗಂಪೇಟೆಯ ಶ್ರೀ ಶರಣಸೇವಾ ಸಂಸ್ಥೆ ವತಿಯಿಂದ ೩ ನೇ ವರ್ಷದ ಪಾದಯಾತ್ರೆ ನಡೆಸಲಾಯಿತು.
ಬೆಳಿಗ್ಗೆ ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿನ ಶ್ರೀ ಶರಣ ಸೇವಾ ಸಂಸ್ಥೆಯ ಕಚೇರಿಯಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಲಕ್ಷ್ಮೀಪುರ ಶ್ರೀಗಿರಿ ಮಠದ ಪೀಠಾಧಿಪತಿಗಳಾದ ಶ್ರೀ ಶ.ಬ್ರ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಜಿ ಚಾಲನೆ ನೀಡಿ ಮಾತನಾಡಿ, ದೇಶದ ಸಾಂಸ್ಕೃತಿಕ ಪರಂಪರೆಯಲ್ಲಿ ಯುವಜನತೆ ಆಸಕ್ತಿ ತೋರುತ್ತಿರುವುದು ಸಂತೋಷದಾಯಕ ಸಂಗತಿ ಎಂದುರು.
ವಿದ್ಯಾರ್ಥಿ ನಾಯಕರ ಮೇಲೆ ಮಾರಣಾಂತಿಕ ಹಲ್ಲೆ: ಕ್ರಮ ಕೈಗೊಳ್ಳದಿದ್ದಲ್ಲಿ ಠಾಣೆಗೆ ಮುತ್ತಿಗೆ: ಮೇಘರಾಜ್
ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಕಲಿಕೇರಿ, ಸೂಗುರೇಶ ಮಡ್ಡಿ, ಚಂದ್ರಶೇಖರ ಡೊಣ್ಣುರು, ಕರ್ನಾಟಕ ನವನಿರ್ಮಾಣ ವೇದಿಕೆಯ ಉತ್ತರ ಕರ್ನಾಟಕ ಪ್ರಧಾನ ಕಾರ್ಯದರ್ಶಿಗಳಾದ ವಾಸುದೇವನಾಯಕ ಬೈರಿಮಡ್ಡಿ, ಯುವ ಮೂಖಂಡರಾದ ರಮೇಶಗೌಡ, ಮಲ್ಲಿಕಾರ್ಜುನ ಸುಭೇದಾರ, ಅಶೋಕ ಹೈಯಾಳ, ದೇವುನಾಯಕ, ರಾಹುಲ್, ಅಜಯ ಸೇರಿದಂತೆ ಸದ್ಬಕ್ತರು ಇದ್ದರು.