ರಾಜಾ ವೆಂಕಟಪ್ಪ ನಾಯಕ ಅಭಿಮಾನಿ ಬಳಗದಿಂದ ಆಹಾರ ನೀರು ವಿತರಣೆ

0
14

ಸುರಪುರ: ರಾಜಾ ವೆಂಕಟಪ್ಪ ನಾಯಕ ಅಭಿಮಾನಿ ಬಳಗದಿಂದ ನಗರದಲ್ಲಿ ಆಹಾರ ನೀರು ಮತ್ತು ಜ್ಯೂಸ್ ವಿತರಣೆ ಮಾಡಲಾಯಿತು.

ಯೂತ್ ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ರಾಜಾ ಕುಮಾರ ನಾಯಕ ನೇತೃತ್ವದಲ್ಲಿ ಅನೇಕ ಜನರ ರಾಜಾ ವೆಂಕಟಪ್ಪ ನಾಯಕ ಅವರ ಅಭಿಮಾನಿಗಳು ನಗರದಲ್ಲಿ ಕರ್ತವ್ಯದಲ್ಲಿದ್ದ ಕೊರೊನಾ ವಾರಿಯರ್ಸ್‌ಗಳಾದ ಪೊಲೀಸ್ ಗೃಹರಕ್ಷಕದಳ ಮತ್ತು ಅನೇಕ ಜನ ಆಟೋ ಲಾರಿ ಚಾಲಕರು ಮತ್ತು ನಿರಾಶ್ರಿತರು ಹಾಗು ಗ್ರಾಮೀಣ ಪ್ರದೇಶದಿಂದ ಆಸ್ಪತ್ರೆಗಳಿಗೆ ಆಗಮಿಸಿದ ಸಾರ್ವಜನಿಕರಿಗೆ ಮತ್ತು ವಯೋವೃಧ್ಧ ಬುದ್ಧಿ ಮಾಂದ್ಯರಿಗೆ ಆಹಾರ ನೀರು ಮತ್ತು ಜ್ಯೂಸ್ ವಿತರಣೆ ಮಾಡುವ ಮೂಲಕ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಜನರಿಗೆ ನೆರವಾದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾವೂದ್ ಇಬ್ರಾಹಿಂ ಪಠಾಣ್ ಪ್ರವೀಣ ನಾಯಕ ರಾಹುಲ್ ಜೈನ್ ರಂಗನಾಥ ದೇವಿಕೇರಾ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here