ಕಲಬುರಗಿ: ಆಟೋ, ಟ್ಯಾಕ್ಸಿ ಮತ್ತು ಕ್ಯಾ ಬ್ ಚಾಲಕರು, ಬೀದಿ ವ್ಯಾಪಾರಿಗಳು ಮತ್ತು ಇನ್ನಿತರೆ ಕಾರ್ಮಿಕರಿಗೆ ಸರ್ಕಾರ ಕೇವಲ 3 ಸಾವಿರ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದನ್ನು ರದ್ದುಪಡಿಸಿ ಅದನ್ನು 10 ಸಾವಿರ ರೂಪಾಯಿಗೆ ಹೆಚ್ಚಿ ಸುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ಮಾಡಲಾಯಿತು.
ಜಗನ್ನಾಥ ಸೂರ್ಯವಂಶಿ, ನಂದಕುಮಾರ ನಾಗಭುಜಂಗೆ, ಮಲ್ಲಿಕಾರ್ಜುನ ಸಾರವಾಡ, ಗೋಪಾಲ ನಾಟಿಕರ, ದತ್ತುಭಾ ಸಗಿ, ಮನೋಹರ ಬೀರನೂರ ಇದ್ದರು.