ಸುರಪುರ: ಮಾಜಿ ಸಂಸದ ದಿ: ರಾಜಾ ರಂಗಪ್ಪ ನಾಯಕ ಅವರ ೬೨ನೇ ಜನ್ಮ ದಿನದ ಅಂಗವಾಗಿ ನಗರದ ವಿವಿಧೆಡೆಗಳಲ್ಲಿ ಕೊರೊನಾ ವಾರಿಯರ್ಸ್ ಮತ್ತು ಸಾರ್ವಜನಿಕರಿಗೆ ಅನ್ನ ನೀರು ವಿತರಣೆ ಮಾಡಲಾಯಿತು.
ರಾಜಾ ವೆಂಕಟಪ್ಪ ನಾಯಕ ಅಭಿಮಾನಿಗಳು ಹಾಗು ರಾಜಾ ರೂಪಕುಮಾರ ನಾಯಕ ಅಭಿಮಾನಿಗಳು ನಗರದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳು ಸ್ವಚ್ಛತಾ ಕರ್ಮಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗು ಆಸ್ಪತ್ರೆಯಲ್ಲಿನ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಎಲ್ಲಡೆ ಸಂಚರಿಸಿ ಅನ್ನ ಮತ್ತು ನೀರು ವಿತರಣೆ ಮಾಡಿ ಮಾಜಿ ಸಂಸದರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ರಾಜಾ ಸಂತೋಷ ನಾಯಕ ಹಾಗು ಮಲ್ಲು ಬಿಲ್ಲವ್ ವಾಸುದೇವ ನಾಯಕ ಡೊಣ್ಣಿಗೇರಾ ವಿವೇಕ್ ಕಮತಗಿ ನಾಗರಾಜ ಗೋಗಿಕೇರಾ ಸೋಪಿಸಾಬ್ ಕುಂಬಾರಪೇಟೆ ಸೇರಿದಂತೆ ಅನೇಕರಿದ್ದರು.