ಶಹಾಬಾದ: ಕೊಳವೆ ಬಾವಿಯಿಂದ ಪೈಪ್ಲೈನ್ ಹಾಕಿಸಿ, ಗ್ರಾಪಂಯಿಂದ ಬಸವ ನಗರದ ಜನರಿಗೆ ನೀರಿನ ಅನುಕೂಲ ಮಾಡಿಕೊಡಲಾಗಿದೆ ಎಂದು ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್ ಹೇಳಿದರು.
ಅವರು ಭಂಕೂರ ಗ್ರಾಪಂ ವ್ಯಾಪ್ತಿಯ ಬಸವ ನಗರದಲ್ಲಿ ಕೊಳವೆ ಬಾವಿಯ ಪೈಪ್ಲೈನ್ ತೊಟ್ಟಿಗೆ ಚಾಲನೆ ನೀಡಿ ಮಾತನಾಡಿದರು. ಕುಡಿಯುವ ನೀರಿನ ಪೈಪಲೈನ್ ಈ ನಗರದಲ್ಲಿದ್ದರೂ ಸಾಕಷ್ಟು ನೀರು ಪೂರೈಕೆಯಾಗುತ್ತಿರಲಿಲ್ಲ. ಕಾರಣ ಬಡಾವಣೆ ಬಹಳ ಎತ್ತರವಾಗಿರುವುದರಿಂದ ನೀರು ಮೇಲಕ್ಕೆ ಹೋಗುತ್ತಿರಲಿಲ್ಲ.ಇದರಿಂದ ಕೆಲವು ಮನೆಗಳಿಗೆ ನೀರಿನ ಸಮಸ್ಯೆ ತಲೆದೋರುತ್ತಿತ್ತು. ಅವರು ಹಲವಾರು ಬಾರಿ ಗ್ರಾಪಂಗೆ ಮನವಿ ಸಲ್ಲಿಸಿದ ಪ್ರಯುಕ್ತ ಪಕ್ಕದ ಪ್ರದೇಶದಲ್ಲಿರುವ ಕೊಳವೆ ಬಾವಿಯಿಂದ ನೀರಿನ ಪೈಪ್ಲೈನ್ ಮಾಡಲಾಗಿದೆ.ಅಲ್ಲದೇ ಸಾಕಾಗುವಷ್ಟು ನೀರಿನ ಪೂರೈಕೆಯೂ ಆಗಲಿದೆ.ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹೇಳಿದರು.
ಸ್ಥಳೀಯ ನಿವಾಸಿ ನೀಲಕಂಠ ಮುದೋಳಕರ್ ಮಾತನಾಡಿ, ಬಸವ ನಗರದಲ್ಲಿ ಕೊಳವೆ ಬಾವಿಯಿಂದ ಪೈಪ್ಲೈನ್ ಹಾಕಿರುವುದರಿಂದ ಇಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಭಂಕೂರ ಗ್ರಾಪಂಯವರು ಮಾಡಿದ ಕಾರ್ಯಕ್ಕೆ ಸಾರ್ವಜನಿಕರ ಪರವಾಗಿ ಅಭಿನಂಧಿಸಿದರು.
ಬಸವ ಸಮಿತಿ ಅಧ್ಯಕ್ಷ ಅಮೃತ ಮಾನಕರ್,ಉಮೇಶ ಪಾಟೀಲ, ಹಣಮಂತರಾಯ ದೇಸಾಯಿ,ರೇವಣಸಿದ್ದಪ್ಪ ಮುಸ್ತಾರಿ, ಚಂದ್ರಕಾಂತ ಅಲಮಾ, ಶರಣಯ್ಯ ಸ್ವಾಮಿ, ರಮೇಶ ಸೇರಿದಂತೆ ಅನೇಕರು ಇದ್ದರು.