ಕೊರೊನಾ ಸೊಂಕು ಕಾಣಿಸಿಕೊಂಡ ಗ್ರಾಮದ ರಸ್ತೆಗೆ ಮುಳ್ಳು ಬೇಲಿ

0
13

ಸುರಪುರ: ತಾಲೂಕಿನ ಖಾನಾಪುರ ಎಸ್.ಹೆಚ್ (ರುಕ್ಮಾಪುರ) ಗ್ರಾಮದಲ್ಲಿ ೮ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮದ ಜನರು ತಮ್ಮ ಗ್ರಾಮಕ್ಕೆ ಹೊರಗಿನಿಂದ ಯಾರೂ ಬರದಂತೆ ನಿರ್ಬಂಧಗೊಳಿಸಿ ಗ್ರಾಮದ ರಸ್ತೆ ಬಾಗಿಲು ಮುಳ್ಳು ಬೇಲಿ ಹಾಕಿ ಬಂದ್ ಮಾಡಿದ್ದಾರೆ.

ಈ ಕುರಿತು ಗ್ರಾಮದ ಮುಖಂಡರು ಮಾತನಾಡಿ,ಹೊರಗಿನವರು ಹೆಚ್ಚು ನಮ್ಮ ಗ್ರಾಮಕ್ಕೆ ಬಂದ ಹಿನ್ನೆಲೆಯಲ್ಲಿ ಕೊರೊನಾ ಸೊಂಕು ಇಷ್ಟೊಂದು ಜನರಲ್ಲಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ.ಅದಕ್ಕಾಗಿ ಗ್ರಾಮದ ಒಳಗೆ ಪ್ರವೇಶವಿರುವ ರಸ್ತೆಗಳನ್ನು ಬಂದ್ ಮಾಡಲಾಗಿದೆ ಅಲ್ಲದೆ ಗ್ರಾಮದ ಆರಾಧ್ಯ ದೈವ ಕೊಟ್ಟುರು ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನೂ ಬಂದ್ ಮಾಡಲಾಗಿದ್ದು,ಕೆಲ ದಿನಗಳು ಜನರ ಓಡಾಟಕ್ಕೆ ಬ್ರೇಕ್ ಬೀಳಲಿದ್ದು ನಂತರ ಮತ್ತೆ ರಸ್ತೆ ಬಂದ್ ಮಾಡಿದ್ದನ್ನು ತೆರವುಗೊಳಿಸುವುದಾಗಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here