ಕಲಬುರಗಿ: ೨ನೇ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಜಿ ಯಳಸಂಗಿ ಹಾಗೂ ಸೇನೆಯ ಕಮಲಾಪೂರ ತಾಲೂಕ ಅಧ್ಯಕ್ಷ ರಾಜು ಎಸ್ ಲೆಂಗಟಿ ನೇತೃತ್ವದಲ್ಲಿ ನಗರದಲ್ಲಿ ಕರೋನ ಪ್ರಂಟ್ ಲೈನ್ ವಾರಿಯರ್ಸ್ಗಳಾದ ಪೋಲಿಸರಿಗೆ ಹಾಗೂ ಬಡವರು ಮತ್ತು ನಿರ್ಗತಿಕರಿಗೆ ಅನ್ನಸಂತರ್ಪಣೆ ಹಾಗೂ ಬಿಸಲೇರಿ ನೀರನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸೇನೆಯ ಜಿಲ್ಲಾಧ್ಯಕ್ಷ ಡಿ.ಕೆ ಮದನಕರ್, ಯುವ ಜಿಲ್ಲಾಧ್ಯಕ್ಷ ಗೌಸ್ ಬಾಬಾ, ಮಂಜುನಾಥ ಎಸ್ ಭಂಡಾರಿ, ಗುರು ಎಸ್ ಮಾಳಗಿ, ವಿಠಲ ಬಾಚನಾಳ ಇದ್ದರು.