ಕಲಬುರಗಿ: ದಕ್ಷೀಣ ಮತಕ್ಷೇತ್ರದಲ್ಲಿ ಬರುವ ಮಹಾನಗರ ಪಾಲಿಕೆಯ ವಾರ್ಡ್ ನಂ. ೩೬ ರಲ್ಲಿ ಬರುವ ಬಿ.ಶಾಮಸುಂದರ ಬಡಾವಣೆಯಲ್ಲಿ ೨ನೇ ಕರೋನಾ ಲಾಕ್ಡೌನ್ ಹಿನ್ನಲೆಯಲ್ಲಿ ಗುಂಡಪ್ಪ ಹೆಚ್.ಸಾಳಂಕೆ ಅವರ ನೇತೃತ್ವದಲ್ಲಿ ಬಡವರಿಗೆ ಆಹಾರ ಕಿಟ್ಟ್ಗಳನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನ್ನಗುಂಟಿ, ಪರಶುರಾಮ ನಾಟೇಕಾರ, ಚನ್ನಬಸಯ್ಯ ಸ್ವಾಮಿ, ಶರಣಗೌಡ, ವೆಂಕಟೇಶ ಭಜಂತ್ರಿ, ನಾಗರಾಜ ಪಟ್ಟಣ, ದಶರಥ ಸಾಳಂಕೆ, ಮಂಜುನಾಥ ಬಿರಾದಾರ, ಮೋಹನ್ ಸಾಳುಂಕೆ, ಮಲ್ಲಿಕಾರ್ಜುನ ಮೇಳಕುಂದಿ, ಮಹಾಂತೇಶ ಪಾಟೀಲ್, ಶಾಮ ಗಾಯಕವಾಡ, ಶರಣು ಗಾಯಕವಾಡ ಸೇರಿದಂತೆ ಇನ್ನಿತರರು ಇದ್ದರು.