ಸುರಪುರ: ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಯುವತಿಯೋರ್ವಳನ್ನು ಮನೆಯವರು ದೇವದಾಸಿ ಮಾಡಲು ಮುಂದಾಗಿದ್ದರು,ಇದಕ್ಕೆ ಒಪ್ಪದ ಯುವತಿ ಚಿಂಚೋಡಿ ಗ್ರಾಮದಿಂದ ತಪ್ಪಿಸಿಕೊಂಡು ಬಮದಿದ್ದು ಆ ಯುವತಿಗೆ ನಮ್ಮ ಇಲಾಖೆಯಿಂದ ನೆರವಾಗಲಾಗಿದೆ ಎಂದು ಸುರಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃಧ್ಧಿ ಇಲಾಖೆ ಯೋಜನಾಧಿಕಾರಿ ಲಾಲಸಾಬ್ ಪೀರಾಪುರ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿರುವ ಅವರು,ಯುವತಿಯನ್ನು ಈಗ ದೇವದುರ್ಗ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ನಂತರ ಸುರಪುರ ದಿಂದ ಯುವತಿಯನ್ನು ದೇವದುರ್ಗಕ್ಕೆ ಕರೆದುಕೊಂಡು ಹೋಗಿ,ದೇವದುರ್ಗದಲ್ಲಿರುವ ಆದಿಜಾಂಬವ ಶಿಕ್ಷಣ ಸಂಸ್ಥೆಯ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ಒಪ್ಪಿಸುವ ಮೂಲಕ ಯುವತಿಗೆ ಆಶ್ರಯ ಕಲ್ಪಸಿಲಾಗಿದೆ ಎಂದು ತಿಳಿಸಿದ್ದು.ಯುವತಿಯ ರಕ್ಷಣೆಗೆ ನ್ಯಾಯವಾದಿಗಳಾದ ಜಯಲಲಿತಾ ಪಾಟೀಲ್ ಅವರು ಕೂಡ ಸಹಕಾರ ನೀಡಿರುವುದಾಗಿ ಸ್ಮರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ರಾಜೇಂದ್ರ ಯಾದವ್ ಕೂಡ ಇದ್ದರು.